ವಿಮಲಾ ಚನ್ನಬಸಪ್ಪ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನ
* ಎಚ್. ಫಲ್ಗುಣ
ಬೆಂಗಳೂರು: ಅಮೆರಿಕೆಯಿಂದ ಬೆಂಗಳೂರಿಗೆ ಬಂದಿದ್ದ ಕವಯಿತ್ರಿ ವಿಮಲಾ ಚನ್ನಬಸಪ್ಪ ಅವರನ್ನು ಹೊಂಬಾಳೆ ಪ್ರತಿಭಾರಂಗ ಈಚೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಪ್ರತಿಭೋತ್ಸವ -5 ಸಮಾರೋಪ ಸಮಾರಂಭದಲ್ಲಿ ಸನ್ಮಾನಿಸಿತು. ಕವಿ ಲಕ್ಷ್ಮೀನಾರಾಯಣ ಭಟ್ಟ ಅವರು ವಿಮಲಾ ಚೆನ್ನಬಸಪ್ಪಾ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಸುಗಮ ಸಂಗೀತ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಾಹಿತಿ ಮಾರ್ಕಂಡಪುರಂ ಶ್ರೀನಿವಾಸ್ ಬಹುಮಾನ ವಿತರಿಸಿದರು. ಲಹರಿ ರೆಕಾರ್ಡಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಿ. ಮನೋಹರ ನಾಯ್ಡ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಹೊಸ ಪ್ರತಿಭೆಗಳ ಶೋಧಕ್ಕಾಗಿ ಹೊಂಬಾಳೆ ಮೇ 18ರಿಂದ 25ರವರೆಗೆ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ವಿಜೇತರಾದ ಸಿಂಚನ ಎಂ. ದೀಕ್ಷಿತ್, ಎನ್. ಅಪರ್ಣ, ಟಿ.ಎಸ್. ನೇತ್ರ, ಎಸ್.ಜಿ. ಗಾಯತ್ರಿ, ವಿಕಾಸ್ ಕೆ. ವಸಿಷ್ಠ, ಅಭಿಮನ್ಯು, ಅವಿನಾಶ್ ಜಿ. ಭಟ್ ಅವರಿಂದ ಸುಗಮ ಸಂಗೀತ ಸಂಜೆ ಕಾರ್ಯಕ್ರಮವೂ ಜರುಗಿತು.
ಮುಖಪುಟ / ಸಾಹಿತ್ಯ ಸೊಗಡು