ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಬಿಟ್ಟು ಲೂಟಿ ಕೆಲಸ ಮಾಡಿದೆ
ಯಾದಗಿರಿ, ಡಿಸೆಂಬರ್ 11 : ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಕೆಲಸ ಮಾಡುವುದು ಬಿಟ್ಟ ಲೂಟಿ ಮಾಡುವ ಕೆಲಸವನ್ನೇ ಮಾಡಿದೆ ಎಂದು ಕೇಂದ್ರ ಮಾಜಿ ಸಚಿವೆ ಪುರಂದೇಶ್ವರಿ ಹೇಳಿದರು.
ಸರ್ಕಾರ ಗೂಂಡಾಗಿರಿ ಮಾಡುತ್ತಿದೆ : ಯಡಿಯೂರಪ್ಪ
ಶಹಾಪುರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ, 2ಜಿ, ಕಲ್ಲಿದ್ದಲು ಹೀಗೆ ಅನೇಕ ಹಗರಣ ಮಾಡಿದೆ. ರಾಜ್ಯದ ಜನ ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಬೇಸತ್ತು ಪರಿವರ್ತನೆ ಬಯಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಜಾತಿ ನಡುವೆ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಲಿಂಗಾಯತ ಸಮುದಾಯ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಎಸ್ ಯಡಿಯೂರಪ್ಪ ಎಲ್ಲ ಸಮುದಾಯದ ಏಳಿಗೆ ಬಯಸುವ ನಾಯಕ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
Comments
English summary
Former Union minister and MP from Andra Pradesh Purandeshwari alleged that the UPA government was involved many scams like 2g spectrum and coal as the congress party was its matter.
Story first published: Monday, December 11, 2017, 18:45 [IST]