ಜು.13ರಂದು ನಾರಾಯಣಪುರ ಜಲಾಶಯಕ್ಕೆ ಕೇಂದ್ರ ಸಚಿವ ಗಜೇಂದ್ರಸಿಂಗ್ ಭೇಟಿ
ಯಾದಗಿರಿ, ಜುಲೈ 12: "ಮಂಗಳವಾರ (ಜು.13)ದಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ (ಬಸವಸಾಗರ) ಜಲಾಶಯಕ್ಕೆ ಕೇಂದ್ರ ನೀರಾವರಿ ಸಚಿವ ಗಜೇಂದ್ರಸಿಂಗ್ ಶೆಖಾವತ್ ಭೇಟಿ ನೀಡಲಿದ್ದಾರೆ,'' ಎಂದು ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯಿಂದ ಬೆಂಗಳೂರಿಗೆ ಆಗಮಿಸಲಿದ್ದು, ನಂತರ ಅಲ್ಲಿಂದ ಮಂಗಳವಾರ ಬೆಳಿಗ್ಗೆ ನಾರಾಯಣಪುರಕ್ಕೆ ಆಗಮಿಸಲಿರುವ ಸಚಿವರು, ಬಸವಸಾಗರ ಜಲಾಶಯ ವೀಕ್ಷಣೆ ಮತ್ತು ಸ್ಯಾಡಾ ಫೇಸ್ 10 ಅಡಿಯಲ್ಲಿ ನಿರ್ಮಿಸಲಾಗಿರುವ ಸ್ವಯಂಚಾಲಿತ ಗೇಟ್ಗಳ ನಿರ್ವಹಣೆಯನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದಾರೆ.
ಕೇಂದ್ರ ಸಚಿವರು ಗೇಟ್ ಸ್ಥಳಕ್ಕೂ ಭೇಟಿ ನೀಡಲಿದ್ದು, ಜಲಾಶಯದ ವಾಸ್ತವ ಪರಿಸ್ಥಿತಿಯನ್ನು ಅರಿಯಲಿದ್ದಾರೆ. ಸಚಿವ ಗಜೇಂದ್ರಸಿಂಗ್ ಶೆಖಾವತ್ ಆಗಮನದ ಹಿನ್ನೆಲೆಯಲ್ಲಿ ಯಾದಗಿರಿ ಜಿಲ್ಲಾಡಳಿತ ಮತ್ತು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ಸ್ಥಳಕ್ಕೆ ಸಹಾಯಕ ಆಯುಕ್ತ ಪ್ರಶಾಂತ್ ಅನಗುಂಡಿ ಹಾಗೂ ಹುಣಸಗಿ ತಹಶೀಲ್ದಾರ ಮಹಾದೇವಪ್ಪಗೌಡ ಬಿರಾದಾರ ನಾರಾಯಣಪುರಕ್ಕೆ ಭೇಟಿ ನೀಡಿ ಹೆಲಿಪ್ಯಾಡ್ ಸೇರಿದಂತೆ ವಿವಿಧ ಸಿದ್ಧತೆ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.
Recommended Video
ಬಸವಸಾಗರ
ಅಣೆಕಟ್ಟು
ಕುರಿತು
ಬಸವಸಾಗರ
ಅಣೆಕಟ್ಟು,
ಈ
ಹಿಂದೆ
ನಾರಾಯಣಪುರ
ಅಣೆಕಟ್ಟು
ಎಂದು
ಕರೆಯಲಾಗುತ್ತಿತ್ತು.
ಇದು
ಕೃಷ್ಣಾ
ನದಿಗೆ
ಅಡ್ಡಲಾಗಿ
ಯಾದಗಿರಿ
ಜಿಲ್ಲೆಯ
ಹುಣಸಗಿ
ತಾಲ್ಲೂಕಿನಲ್ಲಿ
ನಿರ್ಮಿಸಲಾಗಿದೆ.
ಒಟ್ಟು
30
ಮೀಟರ್
ಎತ್ತರವಿದ್ದು,
37.965
ಟಿಎಂಸಿ
ನೀರು
ಸಂಗ್ರಹ
ಸಾಮರ್ಥ್ಯವನ್ನು
ಹೊಂದಿದೆ.
ಕೃಷಿ
ಹಾಗೂ
ಕುಡಿಯುವ
ನೀರಿನ
ಉದ್ದೇಶದಿಂದ
೧೯೮೨ರಲ್ಲಿ
ನಿರ್ಮಿಸಲಾಗಿದೆ.