ಮಗು ಹುಟ್ಟಿದ ಸಂಭ್ರಮದಲ್ಲಿರಬೇಕಿದ್ದ ತಾಯಿ ನದಿಗೆ ಎಸೆಯಲು ಹೋದಳು
ಯಾದಗಿರಿ, ಮಾರ್ಚ್ 21: ನವಜಾತ ಶಿಶುವನ್ನು ನದಿಗೆ ಎಸೆಯಲು ಹೊರಟಿದ್ದ ತಾಯಿಯಿಂದ ಮಗುವನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಆಗ ತಾನೆ ಜನಿಸಿದ್ದ ಹೆಣ್ಣು ಮಗುವನ್ನು ತಾಯಿಯೊಬ್ಬಳು ನದಿಗೆ ಎಸೆಯಲು ಹೊರಟಿದ್ದಳು ಆಗ ಇಬ್ಬರು ಯುವಕರು ಬಂದು ವಿಚಾರಿಸಿದಾಗ ಮಗುವನ್ನು ಅಲ್ಲಿಯೇ ಬಿಟ್ಟು ತಾಯಿ ಹಾಗೂ ಸಂಬಂಧಿಕರು ಪರಾರಿಯಾಗಿದ್ದಾರೆ.
20 ದಿನಗಳ ಹೆಣ್ಣು ಮಗುವನ್ನೇ ಕೊಂದ ದೂರ್ತ ತಂದೆ
ಮಗುವನ್ನು ಯುವಕರು ರಕ್ಷಿಸಿದ್ದಾರೆ. ಕದರಾಪುರ ಗ್ರಾಮದ ಬಳಿ ಇರುವ ಕೃಷ್ಣಾ ನದಿ ಬ್ರಿಡ್ಜ್ ಕಂ ಬ್ಯಾರೇಜ್ ನಲ್ಲಿ ಈ ಘಟನೆ ನಡೆದಿದೆ.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ಸಂಜೆ 4ರಿಂದ 5 ಸುಮಾರಿಗೆ ಹೆರಿಗೆಯಾಗಿದೆ. ಸಂಭ್ರಮ ಪಡಬೇಕಾದ ತಾಯಿಯೇ ಕೆಲಹೊತ್ತಿನಲ್ಲಿ ಮಗುವನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಊರಿಗೆ ಹೋಗುತ್ತೇವೆ ಎಂದು ಹೊರಟಿದ್ದಾರೆ.
ಪರೀಕ್ಷೆಗೆ ತೆರಳಿದ ಬಾಣಂತಿ,ಮಗುವಿನ ಆರೈಕೆಯಲ್ಲಿ ಪೊಲೀಸ್:ವೈರಲ್ ಚಿತ್ರ
ತಾವೇ ಹೆರಿಗೆ ಮಾಡಿದ್ದಾಗಿ ಹೇಳಿದ್ದಾರೆ. ಆದರೆ, ತಾಯಿ ಯಾವ ಊರಿನವರು ಎನ್ನುವುದಕ್ಕೆ ಯಾವುದೇ ದಾಖಲಾತಿ ಇಲ್ಲ ಎಂದು ಹೇಳಿ ಮಗು ಸಮೇತ ವಾಪಸ್ ಕಳುಹಿಸಿದ್ದಾರೆ. ಆದರೆ ಯಾವುದೇ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ರೋಗಿಯ ಹೆಸರು, ತಂದೆ ಅಥವಾ ತಾಯಿ ಇದಲ್ಲದೇ ಪತಿಯ ಹೆಸರು, ಊರು ಕಡ್ಡಾಯವಾಗಿ ನಮೂದು ಮಾಡಬೇಕು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಇದ್ಯಾವುದನ್ನು ಬರೆದುಕೊಳ್ಳದೇ ಹೆರಿಗೆ ಮಾಡಿಸಿರುವುದು ಸಂಶಯಗಳಿಗೆ ಕಾರಣವಾಗಿದೆ.
ಅಕ್ರಮ ಸಂಬಂಧದಿಂದ ಹುಟ್ಟಿದ ನವಜಾತ ಶಿಶುವನ್ನು ಕೊಂದ ಪಾಪಿ ಅಪ್ಪನ ಬಂಧನ
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹೆರಿಗೆಯಾದ ಬಳಿಕ ತಾಯಿಯೇ ಮಗುವನ್ನು ನದಿಗೆ ಎಸೆದಿರುವುದು ಗೊತ್ತಿಲ್ಲ. ಅವರ ವಿಳಾಸ ಇಲ್ಲ ಎಂದು ಸಿಬ್ಬಂದಿಗಳು ಹೇಳಿರುವುದು. ಕಾನೂನು ಬಾಹಿರವಾಗಿದೆ. ಇದರ ಬಗ್ಗೆ ವಿಚಾರಣೆ ನಡೆಸಿ ಕ್ರಮಕೈಗೊಳ್ಳಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.