ಮೋದಿ ರೈತನ ಮಗ ಅಲ್ಲ, ಕಾರ್ಪೊರೇಟ್ ಮಗ: ಖರ್ಗೆ
ಯಾದಗಿರಿ, ಜುಲೈ 13: ನರೇಂದ್ರ ಮೋದಿ ತನ್ನ ರೈತ ಪರ ಕಾಳಜಿಯನ್ನು ಸಾಲಮನ್ನಾ ಮಾಡಿ ತೋರಬೇಕಿತ್ತು ಬದಲಿಗೆ ಅವರು ಕಾರ್ಪೊರೇಟ್ ದೊರೆಗಳ ಸಾಲಮನ್ನಾ ಮಾಡಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಯಾದಗಿರಿಯಲ್ಲಿ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತ ಸಾಲಮನ್ನಾ ಮಾಡುವ ಬದಲು ಕಾರ್ಪೊರೇಟ್ ಸಾಲಮನ್ನಾ ಮಾಡಿದ ಮೋದಿ ರೈತರ ಮಗನಲ್ಲ ಕಾರ್ಪೊರೇಟ್ ಸಂಸ್ಕೃತಿಯ ಮಗ ಎಂದು ಅವರು ವಾಗ್ದಾಳಿ ನಡೆಸಿದರು.
ಮುಂಗಾರು ಅಧಿವೇಶನದಲ್ಲಿ ಮೋದಿ ಸರ್ಕಾರಕ್ಕೆ ಐದು ಸವಾಲುಗಳು
ರೈತರ ಬಹುದಿನದ ಬೇಡಿಕೆಯಾದ ರೈತರ ಸಾಲಮನ್ನಾ ಮಾಡದೆ, ಚುನಾವಣೆ ಸಮೀಪವಿದ್ದಾಗ ಬೆಂಬಲ ಬೆಲೆ ಹೆಚ್ಚಳ ಮಾಡಿರುವುದು ರೈತರ ಕಣ್ಣಿಗೆ ಮಣ್ಣೆರಚುವ ತಂತ್ರ ಎಂದು ಅವರು ಹೇಳಿದರು.
ಅವರ ಚುನಾವಣಾ rallyಗಳು ಈ ಬಾರಿ ಕೈಗೊಡಲಿವೆ ಎಂದ ಅವರು, ಅವರ ಅಸಲಿ ಬಣ್ಣ ರೈತರಿಗೆ, ದೇಶದ ಜನರಿಗೆ ಗೊತ್ತಾಗಿದೆ ಎಂದು ಅವರು ಹೇಳಿದರು.
'ಹೆಚ್ಚು ಭಾಗ್ಯಗಳನ್ನು ಕೊಡಬೇಡಿ, ಸಿದ್ದರಾಮಯ್ಯ ಸ್ಥಾನದಲ್ಲಿ ಕೂರಬೇಕಾದೀತು'
ರಾಜ್ಯದಲ್ಲಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಬಗ್ಗೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯನ್ನು ಒಟ್ಟಿಗೆ ಎದುರಿಸಬೇಕು ಎಂಬುದು ಹೈಕಮಾಂಡ್ ನಿರ್ಧಾರ, ಅವರ ನಿರ್ಧಾರಕ್ಕೆ ನಾವು ಬದ್ಧವಾಗಿರುತ್ತೇವೆ ಎಂದು ಅವರು ಹೇಳಿದರು.