ಯಾದಗಿರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಧರ್ಮ ಉಳಿಸಲು ಕೊಲ್ಲಲು ಹಿಂಜರಿಯಬೇಡಿ ಎಂದಿದ್ದ ಶಾಸಕನ ವಿರುದ್ಧ ಕೇಸ್

|
Google Oneindia Kannada News

ಯಾದಗಿರಿ, ಡಿಸೆಂಬರ್ 15: ಇತ್ತೀಚೆಗೆ ಯಾದಗಿರಿ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ತೆಲಂಗಾಣದ ಬಿಜೆಪಿ ಶಾಸಕನ ವಿರುದ್ಧ ಎಫ್ ಐಆರ್ ದಾಖಲಿಸಿಕೊಳ್ಳುಂತೆ ಈಶಾನ್ಯ ವಲಯದ ಐಜಿಪಿ ಅಲೋಕ್ ಸೂಚಿಸಿದ್ದಾರೆ.

ಹಿಂದೂಗಳು ಖಡ್ಗ ಇಟ್ಟುಕೊಳ್ಳಿ, ಧರ್ಮ ಉಳಿಸಲು ಕೊಲ್ಲಿ: ರಾಜಾಸಿಂಗ್ಹಿಂದೂಗಳು ಖಡ್ಗ ಇಟ್ಟುಕೊಳ್ಳಿ, ಧರ್ಮ ಉಳಿಸಲು ಕೊಲ್ಲಿ: ರಾಜಾಸಿಂಗ್

'ಪ್ರತಿಯೊಬ್ಬ ಹಿಂದುವೂ ತಮ್ಮ ಮನೆಯಲ್ಲಿ ಖಡ್ಗವನ್ನು ಹೊಂದಿರಬೇಕು, ಧರ್ಮ ಉಳಿಸಲು ಅವಶ್ಯಕತೆ ಬಿದ್ದರೆ ಕೊಲ್ಲಲು ಹಿಂಜರಿಯಬಾರದು' ಎಂದು ತೆಲಂಗಾಣದ ಘೋಷಾ ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ರಾಜಾಸಿಂಗ್ ಠಾಕೂರ್ ಯಾದಗಿರಿಯಲ್ಲಿ ಮಂಗಳವಾರ ನಡೆದ ವಿರಾಟ್ ಸಮಾವೇಶದಲ್ಲಿ ಉಗ್ರ ಭಾಷಣ ಮಾಡಿದ್ದರು.

IGP Alok Kumar instructs FIR against Telangana MLA Raja Singh for provocative speech at Yadgiri

ರಾಜಾಸಿಂಗ್ ಠಾಕೂರ್ ಮಾಡಿದ ಉಗ್ರ ಭಾಷಣ ಇದೀಗ ಆ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸನವಾಗಿದೆ. ಈ ಬಗ್ಗೆ ಪರಿಶೀಲಿಸಿದ ಈಶಾನ್ಯ ವಲಯ ಐಜಿಪಿ ಅಲೋಕ್ ಕುಮಾರ್, ರಾಜಾಸಿಂಗ್ ಠಾಕೂರ್ ವಿರುದ್ಧ ಮಾರಕಾಸ್ತ್ರ ಪ್ರದರ್ಶನ ಮತ್ತು ಪ್ರಚೋದನಕಾರಿ ಹೇಳಿಕೆ ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ.

ಅಷ್ಟೇ ಅಲ್ಲದೇ ಆ ಕಾರ್ಯಕ್ರಮದ ಬಂದೋಬಸ್ತ್ ಗೆ ಇದ್ದ ಪೊಲೀಸ್ ರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

English summary
The North-East range IGP Alok Kumar has instructed to SP of FIR against Telangana MLA Raja Singh for a provocative speech at Yadagiri. Every Hindu must keep a sword in the house said Telangana MLA Raja Singh in Hindu Virat function at Yadagiri on December 12.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X