2+2 ಸಭೆ: ವಾಷಿಂಗ್ಟನ್ ತಲುಪಿದ ರಾಜನಾಥ್ ಸಿಂಗ್, ಜೈಶಂಕರ್
ವಾಷಿಂಗ್ಟನ್, ಏಪ್ರಿಲ್ 11: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಸೋಮವಾರ ವಾಷಿಂಗ್ಟನ್ನಲ್ಲಿ ಭಾರತ-ಯುಎಸ್ 2+2 ಸಚಿವರ ಸಂವಾದದಲ್ಲಿ ಪಾಲ್ಗೊಳ್ಳಲು ಯುಎಸ್ ರಾಜಧಾನಿಗೆ ಆಗಮಿಸಿದ್ದಾರೆ.
ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿರುವ ನಡುವೆ 2+2 ಸಭೆಗಾಗಿ ಭಾರತ ಹಾಗೂ ಅಮೆರಿಕ ಸರ್ಕಾರಗಳು ಈ ದ್ವಿಪಕ್ಷೀಯ ಸಭೆಯನ್ನು ನಡೆಸುತ್ತಿದೆ. ಈ ಸಭೆಯನ್ನು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ನೈಸರ್ಗಿಕ ಮಿತ್ರರು ಎಂದು ಬಣ್ಣಿಸಿದ್ದಾರೆ.
I would be leaving New Delhi tonight for a visit to the United States from April 10 to April 15. I look forward to attend the Fourth India-US 2+2 Ministerial Dialogue in Washington DC. Also, I shall be visiting INDOPACOM headquarters in Hawai, during this visit.
— Rajnath Singh (@rajnathsingh) April 9, 2022
ಇನ್ನು ಯುಎಸ್ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ (ಏಪ್ರಿಲ್ 11) ವರ್ಚುವಲ್ ಆಗಿ ಭೇಟಿಯಾಗಲಿದ್ದಾರೆ. ಇದು ಬೈಡೆನ್ ಆಡಳಿತದ ಅಡಿಯಲ್ಲಿ ಮೊದಲ ಭಾರತ-ಯುಎಸ್ 2 + 2 ಸಂವಾದ ಎಂದು ಶ್ವೇತಭವನ ಭಾನುವಾರ ತಿಳಿಸಿದೆ.
ಇಬ್ಬರು ಭಾರತೀಯ ಸಚಿವರುಗಳಾದ ಎಸ್ ಜೈಶಂಕರ್ ಹಾಗೂ ರಾಜನಾಥ್ ಸಿಂಗ್ ಅವರು, ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಜೊತೆ ವೈಟ್ ಹೌಸ್ನಿಂದ ವರ್ಚುವಲ್ ಸಭೆಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ.
ಏಪ್ರಿಲ್ 11ರಂದು ಮೋದಿ-ಬೈಡನ್ ವರ್ಚುವಲ್ ಮೀಟ್
ಪೆಂಟಗನ್ನಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರಿಗೆ ಸ್ವಾಗತ ಮಾಡಲಿದ್ದಾರೆ. ಆ ಬಳಿಕ ನಾಲ್ವರು ಸಚಿವರು ಮೋದಿ-ಬೈಡೆನ್ ವರ್ಚುವಲ್ ಸಭೆಗಾಗಿ ಶ್ವೇತಭವನಕ್ಕೆ ತೆರಳಲಿದ್ದಾರೆ.
ವರ್ಚುವಲ್ ಸಭೆಯಲ್ಲಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಭಾರತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋವಿಡ್ ಸಾಂಕ್ರಾಮಿಕ ರೋಗ, ಹವಾಮಾನ ಬಿಕ್ಕಟ್ಟನ್ನು ಎದುರಿಸುವುದು, ಜಾಗತಿಕ ಆರ್ಥಿಕತೆಯನ್ನು ಬಲಪಡಿಸುವುದು ಮತ್ತು ಭದ್ರತೆಯನ್ನು ಹೆಚ್ಚಿಸುವುದು ಮೊದಲಾದ ವಿಚಾರಗಳನ್ನು ಚರ್ಚೆ ಮಾಡಲಿದ್ದಾರೆ.
ಅಂತರರಾಷ್ಟ್ರೀಯ ಆದೇಶವನ್ನು ಎತ್ತಿಹಿಡಿಯುವುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಸಹಕಾರವನ್ನು ಚರ್ಚಿಸಲಿದ್ದಾರೆ. ಹಾಗೆಯೇ ಪ್ರಜಾಪ್ರಭುತ್ವ ಮತ್ತು ಇಂಡೋ-ಪೆಸಿಫಿಕ್ ವಿಚಾರದಲ್ಲಿಯೂ ಉಭಯ ನಾಯಕರುಗಳು ಚರ್ಚೆ ನಡೆಸಲಿದ್ದಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ತಿಳಿಸಿದ್ದಾರೆ.
ಉಭಯ ನಾಯಕರು ಇಂಡೋ-ಪೆಸಿಫಿಕ್ ಆರ್ಥಿಕ ಚೌಕಟ್ಟಿನ ಅಭಿವೃದ್ಧಿ ಮತ್ತು ಉತ್ತಮ ಗುಣಮಟ್ಟದ ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ನಡೆಯುತ್ತಿರುವ ಮಾತುಕತೆಗಳನ್ನು ಮುನ್ನಡೆಸಲಿದ್ದಾರೆ ಎಂದು ಪ್ಸಾಕಿ ಹೇಳಿದರು.
Recommended Video
"ಉಕ್ರೇನ್ ವಿರುದ್ಧ ರಷ್ಯಾದ ಕ್ರೂರ ಯುದ್ಧದ ಪರಿಣಾಮಗಳ ಬಗ್ಗೆಯೂ ಮಾತುಕತೆ ನಡೆಯಲಿದೆ. ಜಾಗತಿಕ ಆಹಾರ ಪೂರೈಕೆ ಮತ್ತು ಸರಕು ಮಾರುಕಟ್ಟೆಗಳ ಮೇಲೆ ಅದರ ಪರಿಣಾಮವನ್ನು ಕಡಿಮೆ ಮಾಡುವ ಬಗ್ಗೆ ಮೋದಿ, ಬೈಡೆನ್ ಸಮಾಲೋಚನೆ ನಡೆಸಲಿದ್ದಾರೆ," ಎಂದು ತಿಳಿಸಿದರು.