2019ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಚೆಫ್ ಜೋಸ್ ಆಂಡ್ರಸ್ ಆಯ್ಕೆ
ವಾಷಿಂಗ್ಟನ್, ನವೆಂಬರ್ 29: ಯಾವುದೇ ಸ್ವಾರ್ಥವಿಲ್ಲದೆ ಲಕ್ಷಾಂತರ ಮಂದಿಯ ಹಸಿವು ನೀಗಿಸುತ್ತಿರುವ ಚೆಫ್ ಜೋಸ್ ಆಂಡ್ರಸ್ ಅವರು 2019ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ಆಂಡ್ರಸ್ ಅವರು ನೊಬೆಲ್ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಕುರಿತು ನವೆಂಬರ್ ತಿಂಗಳ ಮೊದಲವಾರದಲ್ಲಿ ಮೆರ್ರಿಲ್ಯಾಂಟ್ ಖಚಿತಪಡಿಸಿದೆ. ಅಂತಿಮವಾಗಿ 2019 ಅಕ್ಟೋಬರ್ನಲ್ಲಿ ಅಂತಿಮ ಪಟ್ಟಿ ಬಿಡಯಗಡೆಯಾಗಲಿದೆ.ಮಾರಿದರು,
ಅತ್ಯಾಚಾರ ಎಸಗಿದರು: 'ನೊಬೆಲ್ ಶಾಂತಿ' ಪುರಸ್ಕೃತೆಯ ದಾರುಣ ಕಥೆ
ಜೋಸ್ ಅವರು 'ವರ್ಲ್ಡ್ ಸೆಂಟ್ರಲ್ ಕಿಚನ್' ಎನ್ನುವ ಎನ್ಜಿಓ ಒಂದನ್ನು ನಡೆಸುತ್ತಿದ್ದು, 2010ರಲ್ಲಿ ಹೈತಿಯಲ್ಲಿ ಸಂಭವಿಸಿದ ಭೂಕಂಪದ ಬಳಿಕ ಆಶ್ರಯ, ಉದ್ಯೋಗ ಕಳೆದುಕೊಂಡ ಸಾಕಷ್ಟು ಮಂದಿಗೆ ಎನ್ಜಿಓ ಮೂಲಕ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.
ಡೆನಿಸ್ ಮುಕ್ವೇಜ್, ನಾದಿಯಾ ಮುರದ್ ಗೆ ನೊಬೆಲ್ ಶಾಂತಿ ಪುರಸ್ಕಾರ
ನೈಸರ್ಗಿಕ
ವಿಕೋಪಕ್ಕೆ
ತುತ್ತಾಗಿರುವ
ಇಂಡೋನೇಶಿಯಾದಿಂದ
ಕ್ಯಾಲಿಫೋರ್ನಿಯಾದವರೆಗೆ
ಇರುವ
ಜನರಿಗೆ
ಮಿಲಿಯನ್
ಗಟ್ಟಲೆ
ಆಹಾರವನ್ನು
ಪೂರೈಕೆ
ಮಾಡುತ್ತಿದ್ದಾರೆ.
2018ರ ಆರಂಭದಲ್ಲಿ 'ಜೇಮ್ಸ್ ಬೇರ್ಡ್ ಫೌಂಡೇಶನ್' ಕೊಡಮಾಡುವ 'ಹುಮ್ಯನಿಟೇರಿಯನ್ ಆಫ್ ದಿ ಇಯರ್' ಪ್ರಶಸ್ತಿಗೆ ಆಂಡ್ರಸ್ ಭಾಜನರಾಗಿದ್ದಾರೆ.
My friend I don’t know if it is true, but if it is, I’m humbled by it. I’m one more guy between thousands of people helping feed people in need, every day around the world, unrecognized... https://t.co/EmkLxU6HxT
— José Andrés (@chefjoseandres) November 27, 2018
'ಮೈಫ್ರೆಂಡ್ ನಾನು ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿರುವುದು ನಿಜವೋ ಅಥವಾ ಸುಳ್ಳೋ ಎಂದು ತಿಳಿದಿಲ್ಲ, ಆದರೆ ಅದು ಸತ್ಯವಾದರೆ ಸಂತೋಷ, ದಿನನಿತ್ಯ ಸಾವಿರಾರು ಮಂದಿ ಹಸಿದವರಿಗೆ ಸಹಾಯ ಮಾಡುವವರಿದ್ದಾರೆ, ಅದರಲ್ಲಿ ನಾನೂ ಕೂಡ ಒಬ್ಬ ಆದರೆ ಕೆಲವೇ ಕೆಲವು ಮಂದಿಯ ಸಹಾಯ ಮಾತ್ರ ಗೋಚರವಾಗುತ್ತದೆ. ಇನ್ನು ಕೆಲವರು ಮಾಡುವ ಸಹಾಯ ಯಾರಿಗೂ ತಿಳಿಯುವುದೇ ಇಲ್ಲ 'ಎಂದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.