ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಜಯಪುರ: 2.70 ಲಕ್ಷ ಕಟ್ಟುವವರೆಗೂ ಶವ ನೀಡಲ್ಲ ಎಂದ ಆಸ್ಪತ್ರೆ ವಿರುದ್ಧ ಪ್ರತಿಭಟನೆ

By ವಿಜಯಪುರ ಪ್ರತಿನಿಧಿ
|
Google Oneindia Kannada News

ವಿಜಯಪುರ, ಸೆಪ್ಟೆಂಬರ್ 23: 2.70 ಲಕ್ಷ ಬಾಕಿ ಬಿಲ್ ಪಾವತಿಸುವವರೆಗೂ ಶವ ನೀಡುವುದಿಲ್ಲ ಎಂದು ಕೊರೊನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಶವವನ್ನು ಕುಟುಂಬಕ್ಕೆ ನೀಡಲು ನಿರಾಕರಿಸಿದ ಖಾಸಗಿ ಆಸ್ಪತ್ರೆಯ ವಿರುದ್ಧ ಮೃತನ ಕುಟುಂಬಸ್ಥರು ಭಿಕ್ಷೆ ಬೇಡಿ ಪ್ರತಿಭಟನೆ ನಡೆಸುತ್ತಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

ರಾಜು ಭೋವಿ ಎಂಬುವವರು 18 ದಿನಗಳ ಹಿಂದೆ ಕೊರೊನಾ ಸೋಂಕಿನಿಂದಾಗಿ ವಿಜಯಪುರದ ಕೋಟೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತ ಪಟ್ಟಿದ್ದಾರೆ. ಇಲ್ಲಿವರೆಗೆ ಆಸ್ಪತ್ರೆಗೆ 4.80 ಲಕ್ಷ ರೂ ಬಿಲ್ ಅನ್ನು ಕುಟುಂಬಸ್ಥರು ಪಾವತಿಸಿದ್ದಾರೆ.

ಮೃತದೇಹ ಅದಲು-ಬದಲು: ಕೋವಿಡ್ ಆಸ್ಪತ್ರೆಯ ಎಡವಟ್ಟಿಗೆ ಹಿಡಿಶಾಪಮೃತದೇಹ ಅದಲು-ಬದಲು: ಕೋವಿಡ್ ಆಸ್ಪತ್ರೆಯ ಎಡವಟ್ಟಿಗೆ ಹಿಡಿಶಾಪ

ಆದರೆ ಶವವನ್ನು ಪಡೆಯಲು ಬಾಕಿ 2.70 ಲಕ್ಷ ರೂ. ಹಣವನ್ನು ಪಾವತಿಸಲು ಸೂಚಿಸಿದ್ದಾರೆ. ಅಲ್ಲದೆ ಹಣ ಕಟ್ಟುವವರೆಗೆ ಶವವನ್ನು ನೋಡಲೂ ವೈದ್ಯರು ಮೃತನ ಪತ್ನಿಗೆ ಬಿಡದ ಆರೋಪ ಕೇಳಿಬಂದಿದೆ. ಆಸ್ಪತ್ರೆಯ ಈ ನಡೆಯನ್ನು ವಿರೋಧಿಸಿ ಆಸ್ಪತ್ರೆ ಎದುರು ಕುಟುಂಬಸ್ಥರು ಹಾಗೂ ಸಂಬಂಧಿಕರು ಭಿಕ್ಷೆ ಬೇಡಿ ಹಣ ಜಮಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Vijayapura: Private Hospital Refused Hand Over Covid Patient Body To Family

Recommended Video

Modi ವಿದೇಶಿ ಪ್ರವಾಸದ ಗುಟ್ಟು ರಟ್ಟು | Oneindia Kannada

ಆಸ್ಪತ್ರೆಯವರೇ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದ್ದು, ಆಸ್ಪತ್ರೆ ಎದುರು ಪೊಲೀಸರು ಜಮಾಯಿಸಿದ್ದರು.

English summary
A family of a covid patient who dies today protesting infront of a private hospital that refused to hand over the body to the family in vijayapyra,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X