ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾಕ್ ಧ್ವಜ ಹಾರಿಸಿದ ಪ್ರಕರಣ: ವಿಜಯಪುರ ಕೋರ್ಟ್ ಗೆ ಹಾಜರಾದ ವಾಗ್ಮೋರೆ

By ವಿಜಯಪುರ ಪ್ರತಿನಿಧಿ
|
Google Oneindia Kannada News

Recommended Video

ಪಾಕ್ ಧ್ವಜ ಹಾರಿಸಿದವರು ಕೋರ್ಟ್ ಗೆ ಹಾಜರ್ | Oneindia Kannada

ವಿಜಯಪುರ, ಜುಲೈ 09: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬಂಧಿತ ಆರೋಪಿ ಪರಶುರಾಮ ವಾಗ್ಮೋರೆಯನ್ನು ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಜಯಪುರ ಕೋರ್ಟ್ ಗೆ ಹಾಜರುಪಡಿಸಲಾಗಿದೆ.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದು, ವಾಗ್ಮೋರೆಯನ್ನು ನಿನ್ನೆ ತಡರಾತ್ರಿ ಬೆಂಗಳೂರಿನಿಂದ ವಿಜಯಪುರ ಕೇಂದ್ರ ಕಾರಾಗೃಹಕ್ಕೆ ಕರೆ ತಂದಿದ್ದರು.

ಗೌರಿ ಹತ್ಯೆ ಆರೋಪಿ ಪರಶುರಾಮ್ ತಪ್ಪೊಪ್ಪಿಕೊಂಡಿದ್ದಾನೆ: ಎಸ್‌ಐಟಿಗೌರಿ ಹತ್ಯೆ ಆರೋಪಿ ಪರಶುರಾಮ್ ತಪ್ಪೊಪ್ಪಿಕೊಂಡಿದ್ದಾನೆ: ಎಸ್‌ಐಟಿ

ಪರಶುರಾಮ ವಾಗ್ಮೊರೆ ಮೇಲೆ ಜನವರಿ 1, 2012 ರಂದು ಸಿಂಧಗಿ ತಹಶೀಲ್ದಾರ್ ಕಚೇರಿ ಎದುರು ಪಾಕಿಸ್ತಾನ ಧ್ವಜ ಹಾರಿಸಿದ ಆರೋಪವಿತ್ತು. ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಗೀತಾ ಕೆ ಬಿ ಎದುರು ಆರೋಪಿ ವಾಗ್ಮೊರೆ ಹಾಜರಾಗಿದ್ದ.

Police produced to Wagmore in Vijayapura court.

ಕೋರ್ಟ್ ಆವರಣದಲ್ಲಿ ವಾಗ್ಮೊರೆ ತಂದೆ ಅಶೋಕ, ತಾಯಿ ಕಮಲಾಬಾಯಿ ಸೇರಿದಂತೆ ಕುಟುಂಬದ ಸದಸ್ಯರು ಬೀಡುಬಿಟ್ಟಿದ್ದರು

ಪರಶುರಾಮ ವಾಗ್ಮೊರೆ ಸೇರಿದಂತೆ ಅನೀಲ್ ಸೊಲನಕರ್, ರಾಕೇಶ ಮಠ, ಮಲ್ಲನಗೌಡ ಪಾಟೀಲ್, ಓರ್ವ ಬಾಲ ಅರೋಪಿ, ರೋಹಿತ ನಾವಿ, ಸುನೀಲ್ ಅಗಸರ ಹಾಗೂ ಅರುಣ ವಾಗ್ಮೊರೆ ಕೋರ್ಟ್ ನಲ್ಲಿ ಹಾಜರಾಗಿದ್ದರು.

ಇವರೆಲ್ಲರ ಮೇಲೆ ಐಪಿಸಿ ಸೆಕ್ಷನ್ 124, 153, 120 ಬಿ ಅಡಿಯಲ್ಲಿ ಕೇಸ್ ದಾಖಲಾಗಿದೆ.

English summary
Parashuram Wagmore was one of the accused of Pakistan flag hoisting in front of Sindhi Tahsildar office On January 1, 2012. So police produced to Wagmore in Vijayapura court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X