ಕನ್ನಡ ಎಂಎಯಲ್ಲಿ ಐದು ಚಿನ್ನದ ಪದಕ ಪಡೆದ ಮಹಾರಾಷ್ಟ್ರದ ಯುವತಿ
ವಿಜಯಪುರ, ಫೆಬ್ರವರಿ 14: ಗಡಿಜಿಲ್ಲೆಗಳಲ್ಲಿ ಎರಡು ರಾಜ್ಯಗಳ ನಡುವಿನ ಸಂಘರ್ಷ ಇಂದು ನಿನ್ನೆಯದ್ದಲ್ಲ. ಭಾಷೆ ಮತ್ತು ಗಡಿ ವಿವಾದ ಎರಡೂ ರಾಜ್ಯಗಳ ನಡುವೆ ರಾಜಕೀಯ ಬಣ್ಣ ಪಡೆದು ಹಲವು ದಶಕಗಳೇ ಆಗಿವೆ. ಅದರ ಜತೆಯಲ್ಲಿಯೇ ಇಲ್ಲಿನ ಜನರು ಸೌಹಾರ್ದದ ಬದುಕನ್ನೂ ಕಂಡುಕೊಂಡಿದ್ದಾರೆ.
ಕನ್ನಡಿಗರು ಮರಾಠಿ ಕಲಿಯುವುದು ಮರಾಠಿಗರು ಕನ್ನಡದಲ್ಲಿ ವ್ಯವಹರಿಸುವುದು ಹೊಸತಲ್ಲ. ಆದರೆ, ಮಹಾರಾಷ್ಟ್ರದ ಯುವತಿಯೊಬ್ಬರು ಬುಧವಾರ ನಡೆದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ ಮಹಾರಾಷ್ಟ್ರದ ಸುಧಾರಾಣಿ ಶಿವಪ್ಪ ಮನೂರ್ ಕನ್ನಡ ಮಾಧ್ಯಮದಲ್ಲಿ ಸಾಧನೆ ತೋರುವ ಮೂಲಕ ಗಮನ ಸೆಳೆದಿದ್ದಾರೆ.
ಖೇಲೋ ಇಂಡಿಯಾದಲ್ಲಿ ಕರಾವಳಿ ಬಾಲಕಿಯರ ಪಾರಮ್ಯ
ಸಾಂಗ್ಲಿ ಜಿಲ್ಲೆಯ ಜಾಟ್ ತಾಲ್ಲೂಕಿನ ಬೆಲ್ಲುಂಡ್ಗಿ ಎಂಬ ಕುಗ್ರಾಮದ ಈ ಯುವತಿ ಕನ್ನಡ ಸ್ನಾತಕೋತ್ತರ ಪದವಿಯಲ್ಲಿ ಐದು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.
ಸಾಮಾನ್ಯ ರೈತನ ಮಗಳಾದ ಸುಧಾರಾಣಿ ಅವರ ಕುಟುಂಬದಲ್ಲಿ ಹೆಚ್ಚಿನವರು ಅಕ್ಷರಸ್ಥರಲ್ಲಿ. ಸುಧಾರಾಣಿ ಅವರನ್ನು ಹೊರತುಪಡಿಸಿ ಬೇರಾರೂ ಎಸ್ಎಸ್ಎಲ್ಸಿ ದಾಟಿ ಶಿಕ್ಷಣ ಪಡೆದಿಲ್ಲ. ಆದರೆ, ಇವರು ಮಾತ್ರ ಓದಿನಲ್ಲಿ ಬಹಳ ಚುರುಕು. ದ್ವಿತೀಯ ಪಿಯು ಮತ್ತು ಪದವಿ ಪರೀಕ್ಷೆಗಳಲ್ಲಿಯೂ ಅವರು Rank ಪಡೆದಿದ್ದಾರೆ.
ಎಂಎಯಲ್ಲಿ ಸಾಧನೆ ಮಾಡಿದ ಬಳಿಕ ಇಲ್ಲಿಯೇ ಪಿಎಚ್ಡಿ ಕೂಡ ಮಾಡಲು ಬಯಸಿರುವ ಸುಧಾರಾಣಿ, ಕರ್ನಾಟಕದಲ್ಲಿಯೇ ಕೆಲಸ ಮಾಡಲು ಬಯಸಿದ್ದಾರೆ. ಪ್ರಾಥಮಿಕದಿಂದ ಸ್ನಾತಕೋತ್ತರ ಶಿಕ್ಷಣದವರೆಗೂ ಕನ್ನಡ ಮಾಧ್ಯಮದಲ್ಲಿಯೇ ಓದಿದ್ದು ಎಂಬುದನ್ನು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಬೆಂಗಳೂರು ವಿವಿಯಲ್ಲಿ rank ಪಡೆದರೂ ಇಲ್ಲ ಚಿನ್ನದ ಪದಕ
ಇದೇ ವಿಶ್ವವಿದ್ಯಾಲಯದಲ್ಲಿ ಅಟೆಂಡರ್ ಆಗಿರುವ ನೌಕರನ ಮಗಳು ಗೀತಾ ಜಾಮದಾರ್ ಅರ್ಥಶಾಸ್ತ್ರದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ. ಚಂದ್ರಕಲಾ ತಡಕಲ್ ಸಮಾಜಶಾಸ್ತ್ರ ಎಂಎನಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗಳಿಸಿದ್ದಾರೆ.