Earthquake :ಬಾಗಲಕೋಟೆ, ವಿಜಯಪುರದಲ್ಲಿ ಭೂಕಂಪನ, ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆ ದಾಖಲು
ವಿಜಯಪುರ, ಜುಲೈ 9 : ಹಾಸನ, ಕೊಡಗು ಜಿಲ್ಲೆಯ ನಂತರ ಇದೀಗ ವಿಜಯಪುರ ಮತ್ತಯ ಬಾಗಲಕೋಟೆ ನಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಆತಂಕಕ್ಕೀಡಾಗಿದ್ದಾರೆ. ಶನಿವಾರ ಬೆಳಿಗ್ಗೆ 6:21ರ ಸಮಯದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ, ಮಲಗಿದ್ದ ಜನರು ಭೀತಿಯಿಂದ ಓಡಿ ಹೊರಗೆ ಓಡಿ ಬಂದಿದ್ದಾರೆ.
ವಿಜಯಪುರ ಗ್ರಾಮೀಣಭಾಗದಲ್ಲಿ ಹೆಚ್ಚು ಭೂ ಕಂಪನದ ಅನುಭವ ಹೆಚ್ಚಾಗಿದೆ, ಇನ್ನು ರಿಕ್ಟರ್ ಮಾಪಕದಲ್ಲಿ 4.9 ತೀವ್ರತೆಯಲ್ಲಿ ಭೂಮಿಯಾಳದ 5 ಕಿಲೋ ಮೀಟರ್ ಒಳಗಿನಿಂದ ಭೂಮಿ ನಡುಗಿದೆ. ಬಸವನಬಾಗೇವಾಡಿ ಭಾಗದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಲಜಿ ಪ್ರಾಥಮಿಕ ವರದಿ ನೀಡಲಾಗಿದೆ.
ವಿಜಯಪುರದಲ್ಲಿ 2 ಬಾರಿ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಿಗ್ಗೆ 6:22ಕ್ಕೆ 4.9ರ ತೀವ್ರತೆಯಲ್ಲಿ ಭೂಮಿ ಕಂಪಿಸಿದರೆ, 6:24ರಲ್ಇ 4.6ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ವಿಯಜಪುರ , ಇಂಡಿ, ಬಸವನ ಬಾಗೇವಾಡಿ , ಬಬಲೇಶ್ವರ, ಸೊಲ್ಲಾಪುರ, ಜಮಖಂಡಿ ಭಾಗಗಳಲ್ಲಿ ಭೂಕಂಪನದ ತೀವ್ರತೆ ದಾಖಲಾಗಿದೆ.
ಬಾಗಲಕೋಟೆಯಲ್ಲೂ
ಭೂಕಂಪನದ
ಅನುಭವ:
ಬಾಗಲಕೋಟೆ
ಜಿಲ್ಲೆಯ
ಜಮಖಂಡಿ
ಭಾಗದಲ್ಲಿ
ಭೂಮಿ
ಕಂಪಿಸಿದ
ಅನುಭವ
ಆಗಿದೆ.
ಜಮಖಂಡಿ
ತಾಲ್ಲೂಕಿನ
ತುಬಚಿ
ಎಂಬ
ಗ್ರಾಮದಲ್ಲಿ
ಎರಡು
ಮೂರು
ಸೆಕೆಂಡ್
ಭೂಮಿ
ಕಂಪಿಸಿದೆ.
ಜಮಖಂಡಿ
ನಗರದ
ಹುಡ್ಕೊ
ಕಾಲನಿಯಲ್ಲೂ
6
ಗಂಟೆ
21
ನಿಮಿಷದಲ್ಲಿ
ಭೂಮಿ
ಕಂಪಿಸಿತು
ಎಂದು
ಜಿಯೋಗ್ರಫಿ
ಅಧ್ಯಯನ
ಮಾಡಿರುವ
ಅನಂದ
ಕಾಳಪ್ಪ
ಎಂಬುವವರು
ಮಾಹಿತಿ
ನೀಡಿದ್ದಾರೆ.
ಭೂ
ಕಂಪನದ
ಬಗ್ಗೆ
ಜಿಲ್ಲಾಡಳಿತ
ಹೆಚ್ಚಿನ
ಮಾಹಿತಿ
ಕಲೆ
ಹಾಕುತ್ತಿದೆ.
ರಾಜ್ಯವಲ್ಲದೆ, ಮಹಾರಾಷ್ಟ್ರದ ಮುಂಬೈ , ಪುಣೆ ಭಾಗದಲ್ಲೂ ಭೂಮಿ ಕಂಪನದ ತೀವ್ರತೆ ಉಂಟಾಗಿದೆ. ಮಹಾರಾಷ್ಟ್ರದ ಸಾಂಗಲಿ ಭೂಕಂಪನ ಕೇಂದ್ರ ಹಾಗೂ ಸೊಲ್ಲಾಪುರ ಭೂಕಂಪನ ಕೇಂದ್ರದಿಂದ ತೀವ್ರತೆಯನ್ನು ದಾಖಲಿಸಲಾಗಿದೆ. ಕೆಲವೆಡೆ ಭೂಕಂಪನದಿಂದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು, ಕೆಲವು ತಗಡಿನ ಶೀಟ್ , ಮನೆಗಳು ಅಲುಗಾಡಿದ ಘಟನೆ ನಡೆದಿದೆ.