ಚರ್ಮ ಕುಶಲಕರ್ಮಿಗಳಿಗೆ 5 ಸಾವಿರ ರೂಪಾಯಿ ತಾತ್ಕಾಲಿಕ ಪರಿಹಾರ
ವಿಜಯಪುರ, ಮೇ 18: ಕೋವಿಡ್-19 ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಚರ್ಮ ಕುಶಲಕರ್ಮಿಗಳಿಗೆ ಡಿ.ಸಿ.ಎಂ ಗೋವಿಂದ ಕಾರಜೋಳ ತಾತ್ಕಾಲಿಕ ಪರಿಹಾರ ವಿತರಿಸಿದ್ದಾರೆ.
ರಸ್ತೆ ಬದಿ, ಹೋಟೆಲ್, ಬಸ್ ನಿಲ್ದಾಣಗಳ ಮುಂಭಾಗದಲ್ಲಿ ಕುಳಿತು ಪಾದರಕ್ಷೆ ಮತ್ತು ಇತರ ಚರ್ಮ ವಸ್ತುಗಳ ದುರಸ್ತಿ ಹಾಗೂ ಪಾಲಿಷ್ ಮಾಡುವ ಕಾರ್ಯದಲ್ಲಿ ತೊಡಗಿರುವ ಚರ್ಮ ಕುಶಲಕರ್ಮಿಗಳಿಗೆ 5 ಸಾವಿರ ರೂಪಾಯಿಯ ತಾತ್ಕಾಲಿಕ ಪರಿಹಾರವನ್ನು ಉಪಮುಖ್ಯಮಂತ್ರಿ ಹಾಗೂ ಸಮಾಜ ಕಲ್ಯಾಣ ಸಚಿವ ಗೋವಿಂದ.ಎಂ.ಕಾರಜೋಳ ವಿಜಯಪುರದಲ್ಲಿ ವಿತರಿಸಿದರು.
ಆಟೋ, ಕ್ಯಾಬ್ ಚಾಲಕರು ಸರ್ಕಾರದ 5000 ರು ಪಡೆಯುವುದು ಹೇಗೆ?
ರಾಜ್ಯದಲ್ಲಿರುವ 11,772 ಕುಶಲಕರ್ಮಿಗಳಿಗೆ ತಾತ್ಕಾಲಿಕ ಪರಿಹಾರವನ್ನು ವಿತರಿಸಲಾಗುವುದು ಎಂದು ಗೋವಿಂದ.ಎಂ.ಕಾರಜೋಳ ತಿಳಿಸಿದರು.
ಲಾಕ್ಡೌನ್ : ಕ್ಷೌರಿಕರ ಸಂಕಷ್ಟಕ್ಕೆ ಮಿಡಿದ ಯಡಿಯೂರಪ್ಪ
ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಚಾಲಕರು ಮತ್ತು ಕ್ಷೌರಿಕ ವೃತ್ತಿಯಲ್ಲಿರುವವರಿಗೆ 5 ಸಾವಿರ ರೂಪಾಯಿ ನೆರವನ್ನು ಈ ಹಿಂದೆ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು.