ಅ.20ರಂದು ಸಿಂದಗಿ ಉಪ ಚುನಾವಣಾ ಪ್ರಚಾರದಲ್ಲಿ ಘಟಾನುಘಟಿ ನಾಯಕರು ಭಾಗಿ
ವಿಜಯಪುರ, ಅಕ್ಟೋಬರ್ 20: ಹಾವೇರಿ ಜಿಲ್ಲೆಯ ಹಾನಗಲ್ ಮತ್ತು ವಿಜಯಪುರ ಜಿಲ್ಲೆಯ ಸಿಂದಗಿ ಕ್ಷೇತ್ರಗಳಿಗೆ ಉಪ ಚುನಾವಣೆ ದಿನಾಂಕ ಘೋಷಣೆಯಾಗಿದೆ. ಅಕ್ಟೋಬರ್ 30ರಂದು ಈ ಎರಡು ಕ್ಷೇತ್ರಗಳಿಗೆ ನಡೆಯಲಿದೆ. ನವೆಂಬರ್ 2ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.
ಬಿಜೆಪಿ ಶಾಸಕ ಸಿ.ಎಂ. ಉದಾಸಿ ನಿಧನದಿಂದಾಗಿ ಹಾವೇರಿಯ ಹಾನಗಲ್ ಕ್ಷೇತ್ರ ತೆರವಾಗಿತ್ತು. ಇತ್ತ ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನದಿಂದಾಗಿ ವಿಜಯನಗರದ ಸಿಂದಗಿ ವಿಧಾನಸಭಾ ಕ್ಷೇತ್ರ ತೆರವಾಗಿತ್ತು. ಇದೀಗ ಮೂರು ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಇಳಿದಿದ್ದು, ಗೆಲುವಿಗಾಗಿ ನಾನಾ ಕಸರತ್ತು ನಡೆಸುತ್ತಿದ್ದಾರೆ.
ಕಾಂಗ್ರೆಸ್ಗೆ ಅಭ್ಯರ್ಥಿ ಸಿಗದೆ ಮನಗೂಳಿ ಪುತ್ರನನ್ನು ಹೈಜಾಕ್ ಮಾಡಿದೆ; ಎಚ್ಡಿಕೆ
ಬುಧವಾರ ಸಹ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಪ್ರಮುಖ ನಾಯಕರು ಸಿಂದಗಿಯಲ್ಲಿ ಪ್ರಚಾರ ನಡೆಸಲಿದ್ದಾರೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಸಿಂದಗಿಯಲ್ಲಿ ಬೀಡುಬಿಟ್ಟಿದ್ದು, ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.
ಅದೇ ರೀತಿ ಇಂದು (ಬುಧವಾರ) ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಹ ಉಪ ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ. ಇಬ್ಬರು ಘಟಾನುಘಟಿ ನಾಯಕರು ಉಪ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದು, ರಾಜಕೀಯ ಪಕ್ಷಗಳ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ. ಯಾವ ಪಕ್ಷದಿಂದ ಯಾರೆಲ್ಲಾ ಇಂದು ಪ್ರಚಾರ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
ಬಿಜೆಪಿ
ಪ್ರಚಾರ
ಸಿಂದಗಿ
ಕ್ಷೇತ್ರದ
ಉಪ
ಚುನಾವಣಾ
ಕಣದಲ್ಲಿ
ಮಾಜಿ
ಸಿಎಂ
ಬಿ.ಎಸ್
ಯಡಿಯೂರಪ್ಪ
ಬುಧವಾರ
ಪ್ರಚಾರ
ನಡೆಸಲಿದ್ದಾರೆ.
ಎರಡು
ದಿನ
ಸಿಂದಗಿಯಲ್ಲಿ
ವಾಸ್ತವ್ಯ
ಹೂಡಿ
ಬಿಜೆಪಿ
ಅಭ್ಯರ್ಥಿ
ರಮೇಶ್
ಭೂಸನೂರು
ಪರ
ಬಹಿರಂಗ
ಪ್ರಚಾರ
ನಡೆಸಲಿದ್ದಾರೆ.
ಇಂದು
ಬೆಳಿಗ್ಗೆ
10
ಗಂಟೆಗೆ
ಸಿಂದಗಿ
ಕ್ಷೇತ್ರದ
ಮೋರಟಗಿ
ಗ್ರಾಮದಲ್ಲಿ
ಬಹಿರಂಗ
ಪ್ರಚಾರ
ಸಭೆಯಲ್ಲಿ
ಭಾಗಿಯಾಗಲಿದ್ದಾರೆ.
ಸಂಜೆ
4
ಗಂಟೆಗೆ
ಗೋಲಗೇರಿ
ಜಿಲ್ಲಾ
ಪಂಚಾಯತಿ
ವ್ಯಾಪ್ತಿ
ಗ್ರಾಮಗಳ
ಕಾರ್ಯಕರ್ತರ,
ಸಾರ್ವಜನಿಕರ
ಸಭೆ
ನಡೆಸಲಿದ್ದಾರೆ.
ಇನ್ನು
ಯಡಿಯೂರಪ್ಪರಿಗೆ
ಸಚಿವರು,
ವಿಜಯಪುರ
ಜಿಲ್ಲಾ
ಶಾಸಕರು
ಸಾಥ್
ನೀಡಲಿದ್ದಾರೆ.
ಜೆಡಿಎಸ್
ಪ್ರಚಾರ
ಜೆಡಿಎಸ್
ಪಕ್ಷದ
ಅಭ್ಯರ್ಥಿ
ನಾಜಿಯಾ
ಅಂಗಡಿ
ಪರ
ಮಾಜಿ
ಸಿಎಂ
ಎಚ್.ಡಿ.
ಕುಮಾರಸ್ವಾಮಿ
ಇಂದೂ
ಸಹ
ಪ್ರಚಾರ
ಮಾಡಲಿದ್ದಾರೆ.
ಬೆಳಿಗ್ಗೆ
11.30ಕ್ಕೆ
ಬಳಗಾನೂರು
ಗ್ರಾಮದಲ್ಲಿ
ಸಾರ್ವಜನಿಕ
ಸಭೆ
ನಡೆಸಲಿದ್ದಾರೆ.
ಸಂಜೆ
4
ಗಂಟೆಗೆ
ಚಾಂದಕವಟೆ
ಗ್ರಾಮದಲ್ಲಿ
ಸಾರ್ವಜನಿಕ
ಸಭೆ
ಮಾಡಲಿದ್ದಾರೆ.
ಸಂಜೆ
6ಕ್ಕೆ
ಆಲಮೇಲ
ಪಟ್ಟಣದಲ್ಲಿ
ಬಹಿರಂಗ
ಸಭೆ
ನಡೆಸಲಿದ್ದಾರೆ.
ಮಾಜಿ
ಪ್ರಧಾನಿ
ಎಚ್.ಡಿ.
ದೇವೇಗೌಡ
ಸಹ
ಕ್ಷೇತ್ರದ
ಗ್ರಾಮೀಣ
ಭಾಗದಲ್ಲಿ
ಪ್ರಚಾರ
ನಡೆಸಲಿದ್ದಾರೆ.
ಕಾಂಗ್ರೆಸ್
ಪ್ರಚಾರ
ಇಂದು
ಸ್ಥಳೀಯ
ಕಾಂಗ್ರೆಸ್
ಶಾಸಕರು
ಅಭ್ಯರ್ಥಿ
ಅಶೋಕ್
ಮನಗೂಳಿ
ಪರ
ಪ್ರಚಾರ
ಮಾಡಲಿದ್ದಾರೆ.
ಶಾಸಕರಾದ
ಎಂ.ಬಿ
ಪಾಟೀಲ,
ಶಿವಾನಂದ
ಪಾಟೀಲ,
ಯಶವಂತರಾಯಗೌಡ
ಪಾಟೀಲಮತಯಾಚನೆ
ಮಾಡಲಿದ್ದಾರೆ.
ಸೋಮವಾರದಂದು ಹಾಲಿ ಸಿಎಂ ಹಾಗೂ ಇಬ್ಬರು ಮಾಜಿ ಸಿಎಂಗಳು ತಮ್ಮ ಅಭ್ಯರ್ಥಿ ಪರವಾಗಿ ಮತ ಬೇಟೆ ನಡೆಸಿದ್ದರು. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಎಚ್.ಡಿ. ಕುಮಾರಸ್ವಾಮಿ ಭರ್ಜರಿ ಪ್ರಚಾರ ಮಾಡಿದ್ದು, ಸೋಮವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ ಪರ ಸಿದ್ದರಾಮಯ್ಯ ಸಾಲು ಸಾಲು ಬಹಿರಂಗ ಪ್ರಚಾರ ಸಭೆ ನಡೆಸಿದ್ದಾರೆ.
ಜೆಡಿಎಸ್ ಅಭ್ಯರ್ಥಿ ನಾಜೀಯಾ ಅಂಗಡಿ ಪರ ಮಾಜಿ ಸಿಎಂ ಎಚ್ಡಿಕೆ ಸಿಂದಗಿ ಕ್ಷೇತ್ರದ ಹಳ್ಳಿಗಳಲ್ಲಿ ಪ್ರಚಾರ ಮಾಡಿದರು. ಬಿಜೆಪಿ ಅಭ್ಯರ್ಥಿ ಪರ ಸಿಎಂ ಬೊಮ್ಮಾಯಿ ಆಲಮೇಲ ಪಟ್ಟಣದ ಎ.ಕೆ. ನಂದಿ ಪ್ರೌಢಶಾಲೆಯಲ್ಲಿ ಬಹಿರಂಗ ಪ್ರಚಾರ ಸಭೆ ನಡೆಸಿದ್ದರು.
Recommended Video