ಇಂಗ್ಲೆಂಡಿನಿಂದ ರಾಣಿ ಚೆನ್ನಮ್ಮನ ಖಡ್ಗ ಕರ್ನಾಟಕಕ್ಕೆ: ಪಂಚಮಸಾಲಿಗಳ ಪಣ
Recommended Video
ವಿಜಯಪುರ,
ಅಕ್ಟೋಬರ್
18:
'ರಾಣಿ
ಚೆನ್ನಮ್ಮಾಜಿ
ಅವರ
ಖಡ್ಗವನ್ನು
ಇಂಗ್ಲೆಂಡಿನಿಂದ
ರಾಜ್ಯಕ್ಕೆ
ತರುವುದು
ನಮ್ಮ
ಸಮುದಾಯದ
ಬಹುದಿನಗಳ
ಬೇಡಿಕೆಯಾಗಿದೆ.
ಈ
ನಿಟ್ಟಿನಲ್ಲಿ
ಕಾರ್ಯಪ್ರವೃತ್ತರಾಗಿದ್ದೇವೆ'
ಎಂದು
ವಿಜಯಪುರದಲ್ಲಿ
ಕೂಡಲ
ಸಂಗಮ
ಪಂಚಮಸಾಲಿ
ಪೀಠಾಧ್ಯಕ್ಷ
ಜಯಮೃತ್ಯಂಜಯ
ಸ್ವಾಮೀಜಿಗಳು
ಹೇಳಿದರು.
ಇಂಗ್ಲೆಂಡಿನ ಮ್ಯೂಸಿಯಂನಲ್ಲಿ 18ನೇ ಶತಮಾನದಲ್ಲಿ ಅಲ್ಲಿಗೆ ಹೋಗಿದ್ದು ಮತ್ತೆ ವಾಪಸ್ ತರಲು ಆಗಿಲ್ಲ.ಈಗಾಗಲೇ ಟಿಪ್ಪು ಸುಲ್ತಾನ್ ಖಡ್ಗವನ್ನು ಮಲ್ಯ ಅವರು ಪಡೆದುಕೊಂಡು ಬಂದರು. ಆದರೆ, ಚೆನ್ನಮ್ಮಾಜಿ ಅವರ ಖಡ್ಗವನ್ನು ಅಲ್ಲಿಂದ ತರುವ ನಿಟ್ಟಿನಲ್ಲಿ ಸಮರ್ಥವಾಗಿ ಪ್ರಯತ್ನಗಳು ನಡೆದಿಲ್ಲ.
ಕಿತ್ತೂರ ರಾಣಿ ಚೆನ್ನಮ್ಮನ ಖಡ್ಗವು ಯಾವುದೇ ಖಾಸಗಿ ವ್ಯಕ್ತಿಯ ಕೈ ಸೇರುವ ಮೊದಲು ಎಚ್ಚೆತ್ತುಕೊಂಡು, ರಾಜ್ಯ ಸರ್ಕಾರವು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಿ, ವಿದೇಶಾಂಗ ಸಚಿವಾಲಯದ ಮೂಲಕ ರಾಜ್ಯಕ್ಕೆ ಬರಲಿ.
ಮುಂದಿನ ವರ್ಷ ಅಕ್ಟೋಬರ್ 23ರ ಒಳಗೆ ಚೆನ್ನಮ್ಮ ಅವರ ಖಡ್ಗ ಕಿತ್ತೂರಿಗೆ ಬಂದು ಸೇರುವ ವಿಶ್ವಾಸವಿದೆ ಈ ಕುರಿತು ಸಿಎಂ ಸಿದ್ದರಾಮಯ್ಯನವರಿಗೆ ಮನವಿ ನೀಡಲಾಗುವುದು ಎಂದು ಹೇಳಿದರು.