ವಿಜಯಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಲ್ವರು ಸಂತ್ರಸ್ತರಿಗೆ ಮನೆಯಲ್ಲೇ ಆಶ್ರಯ ನೀಡಿದ ಅಥಣಿಯ ಮಾಜಿ ಶಾಸಕ

|
Google Oneindia Kannada News

ವಿಜಯಪುರ, ಆ 11: ತೀವ್ರ ನೆರೆಯಿಂದ ಎಲ್ಲೂ ಹೋಗಲಾಗದೇ ಅಸಹಾಯಕ ಸ್ಥಿತಿಯಲ್ಲಿದ್ದ ನಾಲ್ವರಿಗೆ ತಮ್ಮ ನಿವಾಸದಲ್ಲೇ ಅಥಣಿಯ ಮಾಜಿ ಬಿಜೆಪಿ ಶಾಸಕ ಲಕ್ಷ್ಮಣ್ ಸವದಿ ಆಶ್ರಯ ನೀಡಿದ್ದಾರೆ.

ಜಲಾವೃತಗೊಂಡಿದ್ದ ವಿಜಯಪುರ ಜಿಲ್ಲೆಯ ದರೂರು ಗ್ರಾಮದ ಬಸ್ ನಿಲ್ದಾಣದ ಟೆರೇಸ್ ನಲ್ಲಿದ್ದ ನಾಲ್ವರನ್ನು ಸೇನಾ ಹೆಲಿಕಾಪ್ಟರ್ ಮೂಲಕ ರಕ್ಷಿಸಲಾಗಿದ್ದು, ಅವರನ್ನು ಸವದಿ ಮನೆಗೆ ಸ್ಥಳಾಂತರಿಸಲಾಗಿದೆ.

ಮಹಾ ಮಳೆಗೆ ಚಿಕ್ಕಮಗಳೂರಿನಲ್ಲಿ ಮುಂದುವರಿದ ಸಾವಿನ ಸರಣಿ; ಗುಡ್ಡ ಕುಸಿತ, ಸಂಪರ್ಕ ಕಡಿತಮಹಾ ಮಳೆಗೆ ಚಿಕ್ಕಮಗಳೂರಿನಲ್ಲಿ ಮುಂದುವರಿದ ಸಾವಿನ ಸರಣಿ; ಗುಡ್ಡ ಕುಸಿತ, ಸಂಪರ್ಕ ಕಡಿತ

ಜಿಲ್ಲೆಯ ಈ ಗ್ರಾಮದ ಹಲವರು ನೆರೆಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನುವ ಮಾಹಿತಿಯಂತೆ, ಸೇನಾ ಹೆಲಿಕಾಪ್ಟರ್ ಅವರ ರಕ್ಷಣೆಗೆ ಧಾವಿಸಿತ್ತು, ಈ ವೇಳೆ, ಬಸ್ ನಿಲ್ದಾಣದ ಮೇಲೆ ಕೂತಿದ್ದ ಇವರನ್ನು ರಕ್ಷಣೆ ಮಾಡಲಾಗಿದೆ.

Army Helicopter Saved Four Persons, Former BJP MLA Given Lakshman Savadi Given Shelter At His Residence

ಬಸ್ ನಿಲ್ದಾಣದಿಂದ ರಕ್ಷಿಸಲ್ಪಟ್ಟ ನಾಲ್ವರನ್ನು ಪರಶುರಾಮ್ , ಅಶೋಕ ಗಳತಗಿ, ಗುರುಸಿದ್ದಯ್ಯ ಮತ್ತು ಹನುಮಂತ ಅವಟಿ ಎಂದು ಗುರುತಿಸಲಾಗಿದೆ.

ಇತ್ತ ಪಶ್ಚಿಮ ಘಟ್ಟದ ಭಾಗದಲ್ಲೂ ವ್ಯಾಪಕ ಮಳೆ ಸುರಿಯುತ್ತಿದ್ದು, 85 ಜನರನ್ನು ಎನ್ ಡಿಆರ್ ಎಫ್ ತಂಡ ರಕ್ಷಣೆ ಮಾಡಿದ್ದು, ಇದರಲ್ಲಿ ಇಬ್ಬರು ಗರ್ಭಿಣಿಯರು ಮತ್ತು ಎರಡು ಹಸುಗೂಸು ಸೇರಿದ್ದಾರೆ.

ಆಗ ರಾಜ್ಯದ ನೆರವಿಗೆ ಬಂದಿದ್ದರು ಮನಮೋಹನ್ ಸಿಂಗ್: ಈಗ ಮೋದಿ ಎಲ್ಲಿದ್ದಾರೆ? ಆಗ ರಾಜ್ಯದ ನೆರವಿಗೆ ಬಂದಿದ್ದರು ಮನಮೋಹನ್ ಸಿಂಗ್: ಈಗ ಮೋದಿ ಎಲ್ಲಿದ್ದಾರೆ?

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆಯ ರುದ್ರ ನರ್ತನ ಮುಂದುವರಿದಿದೆ. ಮನೆ, ತೋಟದ ಮೇಲೆ ಬೃಹತ್ ಗುಡ್ಡ ಕುಸಿದಿದೆ. ಸಿರಿವಾಸೆ ಸಮೀಪದ ಅಡಲುಗದ್ದೆ ಎನ್ನುವ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

English summary
Army Helicopter Saved Four Persons in Darooru Village in Vijayapura District and Former BJP MLA From Athani (Belagavi District) Lakshman Savadi Given Shelter At His Residence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X