ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ: ಅತಿಯಾದ ಮದ್ಯ ಸೇವನೆಯಿಂದ ಯುವಕನ ಸಾವು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಮೇ 7: ಉಡುಪಿಯಲ್ಲಿ ಮದ್ಯವ್ಯಸನಿಗಳ ಕಾಟ ಮಿತಿ ಮೀರುತ್ತಲೇ ಇದ್ದು, ಇಂದು ಓರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಮತ್ತೋರ್ವ ಅಸ್ವಸ್ಥಗೊಂಡು ಪ್ರಾಣ ಕಳೆದುಕೊಂಡಿದ್ದಾನೆ.

ಕಟಪಾಡಿಯಲ್ಲಿ ವಿಪರೀತ ಕುಡಿತದ ಚಟ ಇರುವ ವ್ಯಕ್ತಿ ನೇಣುಬಿಗಿದು ಶರಣಾಗಿದ್ದಾನೆ. ಚಂದ್ರಕಾಂತ್ 32 ಆತ್ಮಹತ್ಯೆಗೆ ಶರಣಾದ ಯುವಕ. ಇನ್ನೊಂದೆಡೆ ಉಡುಪಿ ನಗರದ ಪ್ರಮುಖ ಪಾದಚಾರಿ ರಸ್ತೆಯಲ್ಲಿ ಮದ್ಯಪಾನ‌ ಮಾಡಿ ಅಸ್ವಸ್ಥಗೊಂಡ ಯುವಕ ಮೃತಪಟ್ಟಿದ್ದಾನೆ.

ಕುಡಿದು ಕಾರು ಚಲಾವಣೆ: ಉಡುಪಿಯಲ್ಲಿ ಅಪಘಾತಕುಡಿದು ಕಾರು ಚಲಾವಣೆ: ಉಡುಪಿಯಲ್ಲಿ ಅಪಘಾತ

ಅತಿಯಾದ ಮದ್ಯಸೇವನೆ ಮಾಡಿ ಅಸ್ವಸ್ಥಗೊಂಡು ಬಿದ್ದಿದ್ದ ಅಪರಿಚಿತ ಯುವಕನನ್ನು ಸಮಾಜ ಸೇವಕ ನಿತ್ಯಾನಂದ ಒಳಕಾಡು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ ಯುವಕ ಚಿಕಿತ್ಸೆಗೆ ಸ್ಪಂದಿಸದ ಕಾರಣ ಮೃತಪಟ್ಟಿದ್ದಾನೆ.

Young Man Died From Excessive Alcohol Consumption In Udupi

ಅತಿಯಾದ ಮದ್ಯಸೇವನೆಯು ಯುವಕನ ಸಾವಿಗೆ ಕಾರಣ ಎಂದು ತಿಳಿದು ಬಂದಿದೆ. ಯುವಕನ ವಿಳಾಸ ತಿಳಿದು ಬಂದಿಲ್ಲ. ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ರಕ್ಷಿಸಿ ಇಡಲಾಗಿದೆ. ವಾರಸುದಾರರು ತುರ್ತು ಅಜ್ಜರಕಾಡು ಜಿಲ್ಲಾಸ್ಪತ್ರೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸವಂತೆ, ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ವಿನಂತಿಸಿದ್ದಾರೆ.

English summary
An unidentified youth has died after drinking alcohol on the main sidewalk in Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X