ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇನ್ನಾದರೂ ಮತದಾರರಿಗೆ, ಪಕ್ಷಕ್ಕೆ ನಿಷ್ಠರಾಗಿರಿ ಎಂದು ಕಿಡಿಕಾರಿದ ಉಗ್ರಪ್ಪ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 06: "ರಾಜ್ಯದ ಇತಿಹಾಸದಲ್ಲಿ ಇಂದು ಕರಾಳ ದಿನ. ಜನಾದೇಶಕ್ಕೆ ದ್ರೋಹ ಮಾಡಿದವರು, ಪ್ರಜಾಪ್ರಭುತ್ವಕ್ಕೆ ದ್ರೋಹ ಮಾಡಿದವರು ಸರ್ಕಾರ ರಚಿಸುತ್ತಿದ್ದಾರೆ. ಹತ್ತು ಶಾಸಕರನ್ನು ಮಂತ್ರಿ ಮಾಡಿದ್ದಾರೆ. ಇನ್ನಾದರೂ ಮತದಾರರಿಗೆ, ಪಕ್ಷಕ್ಕೆ ನಿಷ್ಠರಾಗಿರಿ" ಎಂದು ಇಂದು ನಡೆದ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಉಗ್ರಪ್ಪ ಕಿಡಿಕಾರಿದ್ದಾರೆ.

"ಹಣದ ಹೊಳೆ ಹರಿಸಿ, ಅಧಿಕಾರ ದುರ್ಬಳಕೆ ಮಾಡಿ ನೀವು ಗೆದ್ದದ್ದು ಗೊತ್ತಿದೆ. ನಿಮ್ಮ ದಾಸ್ಯ ಪ್ರವೃತ್ತಿ ಪ್ರಮಾಣ ವಚನ ವೇಳೆ ಬಯಲಾಗಿದೆ. ಇನ್ನಾದರೂ ದಾಸ್ಯದ ಪ್ರವೃತ್ತಿ ಬಿಡಿ. ಪ್ರವಾಹ ಪೀಡಿತರ ಸಮಸ್ಯೆಗೆ ಸ್ಪಂದಿಸಿ. ರಾಜ್ಯದ ಹಿತ ಕಾಪಾಡಲು ಕೇಂದ್ರದಿಂದ ಅನುದಾನ‌ ತನ್ನಿ" ಎಂದು ಹೇಳಿದ್ದಾರೆ.

"ಮಾಡರ್ನ್ ಭಸ್ಮಾಸುರರು" ಎಂದು ಮೋದಿ, ಷಾ ಬಗ್ಗೆ ಕಿಡಿಕಾರಿದ ಉಗ್ರಪ್ಪ

ವಿಜಯೇಂದ್ರ ಮನೆಯೇ ಬಿಜೆಪಿ ಶಕ್ತಿ ಕೇಂದ್ರವಾಗಿದೆ ಎಂಬ ವಿಷಯಕ್ಕೆ ಪ್ರತಿಕ್ರಿಯಿಸಿ, "ವಂಶಪಾರಂಪರ್ಯ ಆಡಳಿತ ಅಂತ ನಮ್ಮ ಮೇಲೆ ಆರೋಪಿಸಿದಿರಿ. ಯಡಿಯೂರಪ್ಪ ಮೂಲಕ ಒಂದು ಕುಟುಂಬದವರ ಆಡಳಿತ ನಡೆಯುತ್ತಿದೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ, ಇದನ್ನು ಮರೆಯಬೇಡಿ" ಎಂದು ಎಚ್ಚರಿಸಿದರು.

VS Ugrappa Reaction On Cabinet Expansion

ಮಂಗಳೂರು ಗೋಲಿಬಾರ್ ವಿಡಿಯೋ ಬಹಿರಂಗ: ಉಗ್ರಪ್ಪ ಏನಂದ್ರು? ಮಂಗಳೂರು ಗೋಲಿಬಾರ್ ವಿಡಿಯೋ ಬಹಿರಂಗ: ಉಗ್ರಪ್ಪ ಏನಂದ್ರು?

ಸಂಸದ ಅನಂತ್ ಕುಮಾರ್ ವಿವಾದಾತ್ಮಕ ಹೇಳಿಕೆ ಕುರಿತು ಆಕ್ರೋಶಗೊಂಡು ಮಾತನಾಡಿದ ಅವರು, "ಅನಂತ ಕುಮಾರ್ ಮಾನಸಿಕ‌ ಸ್ಥಿಮಿತ ಕಳೆದುಕೊಂಡಿದ್ದಾರೆ. ಬಿಜೆಪಿಗೆ ಮಾನ ಮರ್ಯಾದೆ ಇದ್ದರೆ ಅನಂತ್ ಕುಮಾರ್ ಹೆಗಡೆಗೆ ಚಿಕಿತ್ಸೆ ಕೊಡಿಸಿ, ಅವರನ್ನು ಸಂಸದ ಸ್ಥಾನದಿಂದ ವಜಾ ಮಾಡಿ. ಇದು ಕೇವಲ ಅನಂತ್ ಕುಮಾರ್ ಹೆಗಡೆ ಧ್ವನಿ ಅಲ್ಲ ಇದು ಬಿಜೆಪಿ ಮೈಂಡ್ ಸೆಟ್. ಬಿಜೆಪಿಯೇ ಎಚ್ಚರಿಸಿದರೂ ಹೆಗಡೆ ಕ್ಷಮೆ ಕೇಳಿಲ್ಲ. ದೇಶದ ಪರಂಪರೆ ಬಗ್ಗೆ, ಗಾಂಧೀಜಿ, ಅಂಬೇಡ್ಕರ್ ಬಗ್ಗೆ ಗೌರವ ಇಲ್ಲವೇ ನಿಮಗೆ? ಗೌರವ ಇದ್ದರೆ ಹೆಗಡೆ ಮೇಲೆ ಶಿಸ್ತುಕ್ರಮ ಕೈಗೊಳ್ಳಿ. ಅನಂತ್ ಕುಮಾರ್ ಹೆಗಡೆ ಸದಸ್ಯತ್ವ ರದ್ದು ಮಾಡಿ" ಎಂದು ಆಗ್ರಹಿಸಿದ್ದಾರೆ

English summary
"Today is the bad day in the history of the state. Those who betrayed democracy are forming a government" said vs ugrappa in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X