ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನಕರ ಭಕ್ತಿಗೆ ಒಲಿದು ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಸತ್ಯ: ಪೇಜಾವರ ಶ್ರೀ

By ಕಿರಣ್ ಸಿರ್ಸೀಕರ್
|
Google Oneindia Kannada News

ಉಡುಪಿ, ನವೆಂಬರ್ 6: ಕನಕದಾಸರ ಭಕ್ತಿಗೆ ಕರಗಿ ಕೃಷ್ಣ ಪಶ್ಚಿಮಕ್ಕೆ ತಿರುಗಿದ್ದು ಹೌದು. ಈ ಬಗ್ಗೆ ಹಲವರಿಗೆ ಜಿಜ್ಞಾಸೆಯಿದೆ. ಕೆಲವು ಬುದ್ಧಿಜೀವಿಗಳು ಟೀಕಿಸುತ್ತಾರೆ. ಕೆಲ ಸನಾತನಿಗಳೂ ಈ ಪವಾಡವನ್ನು ಒಪ್ಪುವುದಿಲ್ಲ. ಕೃಷ್ಣ ಕನಕದಾಸರಿಗೆ ಒಲಿದು ದಿಕ್ಕು ಬದಲಿಸಿದ್ದಲ್ಲ ಎಂದು ವಾದಿಸುತ್ತಾರೆ ಎಂದು ಪೇಜಾವರ ಶ್ರೀಗಳಾದ ವಿಶ್ವೇಶ ತೀರ್ಥರು ಸೋಮವಾರ ಹೇಳಿದ್ದಾರೆ.

ಲಿಂಗಾಯತರ ಮೇಲೆ ಪ್ರೀತಿಯಿದೆ, ನಾನೇನೂ ಚುನಾವಣೆ ನಿಲ್ಲಬೇಕಿಲ್ಲ : ಪೇಜಾವರ ಶ್ರೀಲಿಂಗಾಯತರ ಮೇಲೆ ಪ್ರೀತಿಯಿದೆ, ನಾನೇನೂ ಚುನಾವಣೆ ನಿಲ್ಲಬೇಕಿಲ್ಲ : ಪೇಜಾವರ ಶ್ರೀ

ಕನಕ ದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಚೀನವಾದದ್ದನ್ನೆಲ್ಲ ಬುದ್ಧಿಜೀವಿಗಳು ಅಲ್ಲಗಳೆಯುತ್ತಿದ್ದಾರೆ. ಸನಾತನಿಗಳು ಪುರಂದರದಾಸರು, ಮಧ್ವಾಚಾರ್ಯರದ್ದು ಪವಾಡ ಒಪ್ಪುತ್ತಾರೆ. ಆದರೆ ಕನಕದಾಸರ ಪವಾಡ ಯಾಕೆ ನೀವು ಒಪ್ಪುವುದಿಲ್ಲ ಎಂದು ಅವರು ಪ್ರಶ್ನೆ ಮಾಡಿದರು.

Pejawar seer

ವಾದಿರಾಜ ಸ್ವಾಮಿಗಳು ರಚಿಸಿದ ಹಾಡು ಲಭ್ಯವಾಗಿದೆ. ತಮ್ಮ ಹಾಡಿನಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ. ವಾದಿರಾಜರು ನಾನೂರು ವರ್ಷಗಳ ಹಿಂದಿದ್ದ ಅಷ್ಟ ಮಠಗಳ ಪ್ರಮುಖ ಯತಿಗಳು. ಇನ್ನಾದರೂ ಚರ್ಚೆಗೆ ತೆರೆ ಎಳೆಯಬೇಕು ಎಂದು ಅವರು ಅಭಿಪ್ರಾಯ ಪಟ್ಟರು.

ಕನಕ ದಾಸರ ಭಕ್ತಿಗೆ ಒಲಿದು, ಉಡುಪಿಯಲ್ಲಿ ಶ್ರೀ ಕೃಷ್ಣ ಪಶ್ಚಿಮಕ್ಕೆ ತಿರುಗಿದ ಎಂಬ ವಿಚಾರವಾಗಿ ನಾನಾ ಬಗೆಯ ಅಭಿಪ್ರಾಯಗಳಿವೆ.

English summary
Udupi Krishna turned towards west because of Kanaka dasa devotion, said by Pejawar seer Vishwesha Teertha on Kanaka jayanti (November 6th).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X