ಉಡುಪಿಯಲ್ಲಿ ಸದ್ಯಕ್ಕಂತೂ ಕೃಷ್ಣನ ದರ್ಶನ ಇಲ್ಲ...
ಉಡುಪಿ, ಜೂನ್ 06: ಜೂನ್ 8ರ ನಂತರ ದೇವಸ್ಥಾನಗಳನ್ನು ತೆರೆಯಲು ಸರ್ಕಾರ ಅವಕಾಶ ಕೊಟ್ಟಿದೆ. ಆದರೆ ನಾವು ಇನ್ನೂ 20 ರಿಂದ 30 ದಿನ ಕಾಯುತ್ತೇವೆ. ಮುಂದಿನ ಬೆಳವಣಿಗೆಗಳನ್ನು ನೋಡಿ ದರ್ಶನ ವ್ಯವಸ್ಥೆ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ ಉಡುಪಿ ಕೃಷ್ಣಮಠದ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ.
Recommended Video
ಹೀಗಾಗಿ ಉಡುಪಿಯಲ್ಲಿ ಸದ್ಯಕ್ಕೆ ಕೃಷ್ಣನ ದರ್ಶನ ಇಲ್ಲ. ದೇವಸ್ಥಾನ ಆರಂಭಿಸಿದರೆ ಎಲ್ಲೆಡೆಯಿಂದಲೂ ಭಕ್ತರು ಬರುತ್ತಾರೆ. ಆದರೆ ಭಕ್ತರ ಮತ್ತು ಕೃಷ್ಣಮಠದ ಸಿಬ್ಬಂದಿ ಆರೋಗ್ಯ ನಮಗೆ ಮುಖ್ಯ ಎಂದು ಹೇಳಿದ್ದಾರೆ.
ಜೂನ್ 8ರ ನಂತರವೂ ತೆರೆಯಲ್ಲ ಚಿಕ್ಕಮಗಳೂರಿನ ಈ ಎರಡು ದೇವಾಲಯಗಳು
"ಕೃಷ್ಣಮಠದಲ್ಲಿ ಬಹಳ ಹಿಂದಿನಿಂದಲೂ ಯತಿಗಳೇ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯವಿದೆ. ಕೃಷ್ಣ ಮಠಕ್ಕೆ ಪ್ರತಿದಿನ 1 ಲಕ್ಷ ರೂಪಾಯಿಯಷ್ಟು ಖರ್ಚು ಇದೆ. ಲಾಕ್ ಡೌನ್ ಸಂದರ್ಭದಲ್ಲಿ ನಮ್ಮೆಲ್ಲಾ ಸಿಬ್ಬಂದಿಗೆ ಸಂಬಳ ಕೊಡುತ್ತಿದ್ದೇವೆ. ಮಠ ತೆರೆಯುವ ಬಗ್ಗೆ ಮುಂದೆ ತೀರ್ಮಾನ ಮಾಡುತ್ತೇವೆ. ಸದ್ಯಕ್ಕೆ ಕೊರೊನಾ ಸೋಂಕು ಶೀಘ್ರ ದೂರವಾಗಲಿ ಎಂದು ಪ್ರಾರ್ಥನೆ ಮಾಡುತ್ತೇವೆ" ಎಂದಿದ್ದಾರೆ ಅದಮಾರು ಕಿರಿಯ ಸ್ವಾಮೀಜಿ.
ಜೊತೆಗೆ ಕೊರೊನಾ ವೈರಸ್ ದೂರವಾಗಿಸಲು ಹೋರಾಡುತ್ತಿರುವ ಸರ್ಕಾರಗಳ ಹಾಗೂ ಅಧಿಕಾರಿಗಳ ಕಾರ್ಯವನ್ನೂ ಶ್ಲಾಘಿಸಿದ್ದಾರೆ.