ಮಳೆಗಾಲದ ತುರ್ತು ಪರಿಸ್ಥಿತಿಗೆ ಸ್ಪಂದಿಸಲು ಉಡುಪಿ ಹೆಲ್ಪ್ ಆಪ್
ಉಡುಪಿ, ಜೂನ್ 12: ಮಳೆಗಾಲದಲ್ಲಿ ಎದುರಾಗುವ ವಿವಿಧ ಪ್ರಾಕೃತಿಕ ಸಮಸ್ಯೆಗಳ ಕ್ಷಿಪ್ರ ನಿರ್ವಹಣೆಗೆ ಜಾರಿಗೆ ತಂದಿರುವ ಹೊಸ ಆಪ್ 'ಉಡುಪಿ ಹೆಲ್ಪ್' ಅನ್ನು ಜಿಲ್ಲಾ ಉಸ್ತುವಾರಿ ಸಚಿವೆ ಡಾ. ಜಯಮಾಲಾ ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬಿಡುಗಡೆಗೊಳಿಸಿದರು.
ಮತ್ತೊಂದು ಮಹತ್ವದ ನಿರ್ಧಾರ ಘೋಷಿಸಿದ ಉಡುಪಿ ಜಿಲ್ಲಾಧಿಕಾರಿ
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾಗರೀಕರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಒದಗಿಸಲು ಉಡುಪಿ ಜಿಲ್ಲಾಡಳಿತ ಉತ್ತಮ ಕಾರ್ಯ ಕೈಗೊಂಡಿದೆ. ಮಳೆಗಾಲದಲ್ಲಿ ಹಲವಾರು ರೀತಿಯ ಪ್ರಾಕೃತಿಕ ಸಮಸ್ಯೆಗಳು ಎದುರಾಗುತ್ತಿವೆ. ಇವುಗಳಿಗೆ ಸ್ಪಂದನೆಯ ತುರ್ತು ಅಗತ್ಯವಾಗಿದೆ. ಉಡುಪಿ ಹೆಲ್ಪ್ ಆಪ್ ಮೂಲಕ ಜಿಲ್ಲಾಡಳಿತವು ನಾಗರೀಕರಿಗೆ ತಮ್ಮ ಸಮಸ್ಯೆಗಳನ್ನು ನೇರವಾಗಿ ತಮಗೆ ತಲುಪಿಸಲು ಅನುಕೂಲ ಮಾಡಿದ್ದು, ಜನರು ಕ್ಷಿಪ್ರವಾಗಿ ಪರಿಹಾರ ಪಡೆಯಬಹುದು ಎಂದು ಹೇಳಿದರು.
ಜಿಲ್ಲಾಧಿಕಾರಿ
ಹೆಪ್ಸಿಬಾ
ರಾಣಿ
ಕೊರ್ಲಪಾಟಿ,
ಉಡುಪಿ
ಹೆಲ್ಪ್
ಆಪ್
ನಲ್ಲಿ
ನಾಗರೀಕರ
ದೂರುಗಳಿಗೆ
ಆರು
ಗಂಟೆಗಳೊಳಗೆ
ನಗರಸಭೆ
ಸ್ಪಂದಿಸಲಿದೆ.
ಫೋಟೊ
ಮತ್ತು
ವೀಡಿಯೋ
ಅಪ್ಲೋಡ್
ಮಾಡಬಹುದು
ಎಂದು
ಮಾಹಿತಿ
ನೀಡಿದರು.
ಜಿಲ್ಲಾ
ಪೊಲೀಸ್
ವರಿಷ್ಠಾಧಿಕಾರಿ
ನಿಶಾ
ಜೇಮ್ಸ್,
ಅಪರ
ಜಿಲ್ಲಾಧಿಕಾರಿ
ವಿದ್ಯಾ
ಕುಮಾರಿ,
ಜಿಲ್ಲಾ
ನಗರಾಭಿವೃದ್ದಿ
ಕೋಶ
ಯೋಜನಾ
ನಿರ್ದೇಶಕ
ಸಂತೋಷ್
ಕುಮಾರ್
ಮತ್ತಿತರರು
ಇದ್ದರು.
ಸಾರ್ವಜನಿಕರು
ಮೊಬೈಲ್
ನಲ್ಲಿ
ಗೂಗಲ್
ಪ್ಲೇ
ಸ್ಟೋರ್
ನಿಂದ
ಆಪ್
ಡೌನ್
ಲೋಡ್
ಮಾಡಿಕೊಳ್ಳಬಹುದು.