ಉಡುಪಿ ಮೇಲ್ಸೇತುವೆಗೆ ಪೇಜಾವರರ ಹೆಸರು ನಾಮಕರಣ
ಉಡುಪಿ, ಜೂನ್ 6: ಬೆಂಗಳೂರಿನ ಯಲಹಂಕ ಮೇಲ್ಸೇತುವೆ ನಾಮಕರಣ ಜಟಾಪಟಿಗೆ ಕಾರಣವಾಗಿದೆ. ಅದರ ನಡುವೆ ಉಡುಪಿಯಲ್ಲಿಯೂ ಮೇಲ್ಸೇತುವೆಗಳಿಗೆ ನಾಮಕರಣ ಮಾಡಲಾಗಿದ್ದು, ಚರ್ಚೆಗೆ ಕಾರಣವಾಗಿದೆ.
Recommended Video
ನಿಷಿದ್ಧ
ಪದ
ಬಳಕೆ
ಮಾಡಿ
ವಿವಾದಕ್ಕೆ
ಸಿಲುಕಿದ
ಯುವರಾಜ್
ಸಿಂಗ್
|
Oneindia
Kannada
ಉಡುಪಿಯ ಕರಾವಳಿ ಬೈಪಾಸ್ ಮೇಲ್ಸೇತುವೆಗೆ ಪೇಜಾವರ ಶ್ರೀಗಳ ಹೆಸರು ನಾಮಕರಣ ಮಾಡಲಾಗಿದೆ. ಉಡುಪಿಯ ರಾಷ್ಟ್ರೀಯ ಹೆದ್ದಾರಿ 66ರ ಕರಾವಳಿ ಬೈಪಾಸ್ ಬಳಿ ಈ ಮೇಲ್ಸೇತುವೆ ಇದೆ. ಇಂದು ಸಂಜೆ ಹೊತ್ತಿಗೆ ಮೇಲ್ಸೇತುವೆ ಮೇಲೆ ಪೇಜಾವರ ವಿಶ್ವೇಶ್ವ ತೀರ್ಥ ಮೇಲ್ಸೇತುವೆ ಎಂಬ ಬೋರ್ಡು ಪ್ರತ್ಯಕ್ಷವಾಗಿದೆ.
ಮಂಗಳೂರಿನಲ್ಲಿ ರಾಣಿ ಅಬ್ಬಕ್ಕ ಕೋಟಿ-ಚೆನ್ನಯ ಮೊದಲಾದ ಹೆಸರುಗಳನ್ನು ಸೇತುವೆಗಳಿಗೆ ಇಡಲಾಗಿತ್ತು. ಬೆಂಗಳೂರಿನ ಯಲಹಂಕ ಸೇತುವೆ ವಿವಾದದ ಬಳಿಕ ಅಲ್ಲಲ್ಲಿ ಕಂಡು ಬರುತ್ತಿರುವ ವಿದ್ಯಮಾನ ಇದಾಗಿದೆ.
ಉಡುಪಿ ಜಿಲ್ಲೆಯ ಜನರಲ್ಲಿ ಇದು ಅಚ್ಚರಿ ಮೂಡಿಸಿದ್ದು, ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
Comments
English summary
After yelahanka flyover controversy, Udupi flyover named as Pejavara Shree Vishwesha Tirtha flyover.
Story first published: Saturday, June 6, 2020, 20:54 [IST]