ಭೂ ವಿವಾದ: ಕೋಟದಲ್ಲಿ ಯುವಕರಿಬ್ಬರ ಭೀಕರ ಕೊಲೆ
ಉಡುಪಿ, ಜನವರಿ 27: ಜಿಲ್ಲೆಯ ಕೋಟದಲ್ಲಿ ಯುವಕರಿಬ್ಬರ ಭೀಕರ ಕೊಲೆಯಾಗಿದೆ. ಕೊಲೆಯಾದ ಯುವಕರ ಹೆಸರು ಭರತ್ ಮತ್ತು ಯತೀಶ್.
ಕಳೆದ ತಡರಾತ್ರಿ ಈ ಘಟನೆ ನಡೆದಿದ್ದು, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ತಲವಾರಿನಿಂದ ದಾಳಿ ನಡೆಸಿದ್ದಾರೆ. ಕೋಟ ರಾಜಲಕ್ಷ್ಮಿ ಸಭಾಂಗಣದ ಸರ್ವೀಸ್ ರೋಡ್ ನಲ್ಲಿ ದುಷ್ಕರ್ಮಿಗಳು ಅಡ್ಡಗಟ್ಟಿ ದಾಳಿ ನಡೆಸಿದ್ದಾರೆ.
ಹಿಂದೂ ಮುಖಂಡರ ಹತ್ಯೆಗೆ ಸಂಚು ರೂಪಿಸಿದ್ದ ಡಾನ್ ಬಂಧನ
ಕಳೆದ ತಡರಾತ್ರಿ ನಡೆದ ತಲ್ವಾರು ದಾಳಿಯಲ್ಲಿ ಭರತ್ ಮತ್ತು ಯತೀಶ್ ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಜಗಳವು
ಜಮೀನಿಗೆ
ಸಂಬಂಧಿಸಿದ
ವಿಚಾರದಲ್ಲಿ
ನಡೆದಿದೆ
ಎನ್ನಲಾಗಿದೆ.
ಸ್ನೇಹಿತ
ಲೋಹಿತ್
ಎಂಬುವವನಿಗೆ
ಬೆಂಬಲಿಸಿದ್ದಕ್ಕೆ
ಇಬ್ಬರ
ಮೇಲೆ
ದಾಳಿಯಾಗಿರಬಹುದು
ಎಂಬ
ಶಂಕೆ
ವ್ಯಕ್ತವಾಗಿದ್ದು,
ಕೋಟ
ಪೋಲಿಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.
Comments
English summary
Two youths killed by perpetrators at Kota in Udupi district. Incident occurred last night. A case has been registered in Kota police station.
Story first published: Sunday, January 27, 2019, 9:35 [IST]