ಉಡುಪಿಯಲ್ಲಿ ಖಾಸಗಿ ಬಸ್ ನೌಕರನ ಬರ್ಬರ ಹತ್ಯೆ
ಉಡುಪಿ, ಜುಲೈ 12: ಇಬ್ಬರು ದುಷ್ಕರ್ಮಿಗಳು ನಿನ್ನೆ ತಡರಾತ್ರಿ ಖಾಸಗಿ ಬಸ್ ನೌಕರನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಬೈರಂಪಳ್ಳಿ ಎಂಬಲ್ಲಿ ಈ ಘಟನೆ ನಡೆದಿದೆ.
ಮಲ್ಪೆ ಮೀನು ವ್ಯಾಪಾರಿ ಕೊಲೆ ಯತ್ನ ಪ್ರಕರಣ; ಐವರ ಬಂಧನ
ಪ್ರಶಾಂತ್ ಪೂಜಾರಿ (35) ಕೊಲೆಯಾದವರು. ನಿನ್ನೆ ತಡರಾತ್ರಿ ಇಬ್ಬರು, ಪ್ರಶಾಂತ್ ಪೂಜಾರಿ ಮನೆಗೆ ಬಂದು ಜಗಳ ನಡೆಸಿದ್ದಾರೆ. ನಂತರ ಅವರನ್ನು ನಿರ್ಜನ ಪ್ರದೇಶವಾದ ದೂಪದಕಟ್ಟೆ ಕಡೆಗೆ ಕರೆದುಕೊಂಡು ಹೋಗಿ, ತಲವಾರ್ ನಿಂದ ಕಡಿದು ಹತ್ಯೆ ಮಾಡಲಾಗಿದೆ.
ಕೃತ್ಯ ಎಸಗಿದವರು ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ತೆರಳಿ ತನಿಖೆ ಆರಂಭಿಸಿದ್ದಾರೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿರಬೇಕು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
Comments
English summary
Private bus worker hacked to death in Hiriyadka near Udupi. Deceased identified as Prashanth Poojari (35). Two persons murdered prashanth near doopadakatte.
Story first published: Friday, July 12, 2019, 12:28 [IST]