ಇರ್ಜಿಕೊಡ್ಲು ಬಳಿ 3 ಚಿರತೆಗಳ ಪೈಕಿ 2 ಚಿರತೆ ಬೋನಿಗೆ
ಉಡುಪಿ, ಡಿಸೆಂಬರ್ 28: ಹಾಡಹಗಲೇ ಗುಂಪಾಗಿ ಬಂದು ದಾಳಿ ಮಾಡುತ್ತಿದ್ದ 3 ಚಿರತೆಗಳ ಪೈಕಿ 2 ಚಿರತೆ ಬೋನಿಗೆ ಬಿದ್ದಿವೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಇರ್ಜಿಕೊಡ್ಲು ಎಂಬಲ್ಲಿ ಈ ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.
ಕೋರ್ಟ್ಗೆ ಬಂದ ಅನಿರೀಕ್ಷಿತ ಅತಿಥಿ!: ಜಡ್ಜ್, ವಕೀಲರೆಲ್ಲ ದಿಕ್ಕಾಪಾಲಾಗಿ ಓಡಿದ್ದೇಕೆ?
ಇಲ್ಲಿಯ ನಿವಾಸಿ ಗುಲಾಬಿ ಕುಲಾಲ್ತಿ ಎಂಬವರ ಮನೆಯ ಹಟ್ಟಿಯಲ್ಲಿದ್ದ ದನಕರುಗಳ ಮೇಲೆ 3 ಚಿರತೆ ಗುಂಪಾಗಿ ಇತ್ತೀಚೆಗೆ ದಾಳಿ ಮಾಡಿದ್ದವು. ಹಾಡಹಗಲೇ ದಾಳಿ ಮಾಡುತ್ತಿದ್ದ ಈ ಚಿರತೆಗಳು ಇದುವರೆಗೆ 20 ಹಸು ಮತ್ತು 15 ಸಾಕು ನಾಯಿ, ಬೆಕ್ಕುಗಳನ್ನು ಹಿಡಿದಿವೆ ಎಂದು ಹೇಳಲಾಗಿದೆ.
ಕಾಡಿನಲ್ಲಿ ಧ್ಯಾನ ಮಾಡಲು ಹೋಗಿ ಚಿರತೆಗೆ ಬಲಿಯಾದ ಬೌದ್ಧ ಬಿಕ್ಕು
ಈ ಚಿರತೆಗಳು ಗುಂಪಾಗಿ ಬಂದು ದಾಳಿ ಮಾಡುತ್ತಿದ್ದದನ್ನು ಕಂಡು ಸ್ಥಳೀಯರು ಭಯಭೀತರಾಗಿದ್ದರು. ಮೊಳಹಳ್ಳಿ ಪರಿಸರದಲ್ಲಿ ಜನರು ಒಂಟಿಯಾಗಿ ತಿರುಗಾಡುವುದು ಮತ್ತು ರಾತ್ರಿ ಸಂಚಾರ ಮಾಡುವುದನ್ನೇ ನಿಲ್ಲಿಸಿದ್ದರು.
ಚಿರತೆಗಳು ಗುಂಪಾಗಿ ದಾಳಿ ಮಾಡುತ್ತಿರುವ ಘಟನೆಯ ಕುರಿತು ಶಂಕರನಾರಾಯಣ ಅರಣ್ಯ ಇಲಾಖೆಗೆ ಸ್ಥಳೀಯರು ದೂರು ನೀಡಿದ್ದರು. ಈ ಕುರಿತು ಕ್ಷೀಪ್ರ ಕಾರ್ಯಾಚರಣೆ ನಡೆಸಿದ ಇಲಾಖೆ ಸಿಬ್ಬಂದಿಗಳ ತಂಡ ಗುಲಾಬಿ ಕುಲಾಲ್ತಿ ಮನೆಯ ಬಳಿ ಬೋನು ಇರಿಸಿತ್ತು. ಈ ಹಿನ್ನೆಲೆಯಲ್ಲಿ ಒಂದೇ ದಿನದಲ್ಲಿ ಎರಡು ಚಿರತೆಗಳು ಸೆರೆಯಾಗಿದ್ದು, ಮೂರನೇ ಚಿರತೆಗಾಗಿ ಬೋನಿರಿಸಲಾಗಿದೆ.
ಉಡುಪಿಯ ಬೈಂದೂರಿನಲ್ಲಿ ಬಾವಿಗೆ ಬಿದ್ದ ಅಪರೂಪದ ಕರಿ ಚಿರತೆ ರಕ್ಷಣೆ
ಈ ಭಾಗದಲ್ಲಿ ನಿರಂತರವಾಗಿ ಚಿರತೆ ಹಾವಳಿಗೆ ಒಳಗಾಗುತ್ತಿರುವ ಹೈನು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಕಾಡು ಪ್ರಾಣಿಗಳು ನಾಡಿಗೆ ಬರದಂತೆ ಕ್ರಮಕ್ಕಾಗಿ ಸ್ಥಳೀಯರು ಆಗ್ರಹಸಿದ್ದಾರೆ.