ಸೈಕಲ್ ಡಿಕ್ಕಿ ತಪ್ಪಿಸಲು ಹೋಗಿ ಸರಣಿ ಅಪಘಾತ
ಉಡುಪಿ, ಅಕ್ಟೋಬರ್ 10: ಉಡುಪಿ ಜಿಲ್ಲೆಯ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸರಣಿ ಅಪಘಾತ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತವೊಂದು ತಪ್ಪಿದೆ. ಸೈಕಲ್ ಸವಾರನಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಮೂರು ಕಾರುಗಳು ಪರಸ್ಪರ ಡಿಕ್ಕಿ ಹೊಡೆದು ಜಖಂಗೊಂಡಿವು.
ದುರ್ಗಾಮಾತಾ ಮೆರವಣಿಗೆ ವೇಳೆ ಲಾರಿ ಹರಿದು ಮೂವರ ಸಾವು
ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ಸೈಕಲ್ ನಲ್ಲಿ ವೃದ್ಧರೊಬ್ಬರು ಆಲ್ಟೋ ಕಾರಿಗೆ ಅಡ್ಡ ಬಂದಾಗ ಈ ಘಟನೆ ಸಂಭವಿಸಿದೆ. ಆಲ್ಟೋ ಕಾರು ಸೈಕಲ್ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋದ ಪರಿಣಾಮ ಹಿಂದಿನಿಂದ ಬಂದ ಕಾರುಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಆಲ್ಟೊ ಕಾರಿನ ಹಿಂದೆ ಇದ್ದ ಮಹೇಂದ್ರ ಟಿಯುವಿ ವಾಹನ, ಟೊಯೋಟಾ ಇಟಿಯಾಸ್ ಕಾರು, ಅದರ ಹಿಂದೆ ಇದ್ದ ಸ್ಕಾರ್ಪಿಯೋ ಪರಸ್ಪರ ಡಿಕ್ಕಿ ಹೊಡೆದು ಜಖಂಗೊಂಡಿವೆ.
ಸರಣಿ ಅಪಘಾತದಿಂದ ವಾಹನದೊಳಗಿದ್ದವರಿಗೆ ಸಣ್ಣಪುಟ್ಡ ಗಾಯಗಳಾಗಿವೆ. ಅಪಘಾತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಯಿತು. ಕೋಟ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.