ಕರಾವಳಿ ಜಿಲ್ಲೆಗಳ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಇಲ್ಲ
ಉಡುಪಿ, ಮೇ 24: ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ರಮ್ಜಾನ್ ಹಿನ್ನೆಲೆ ಇಂದು ಯಾವುದೇ ಮಸೀದಿಗಳಲ್ಲೂ ಸಾಮೂಹಿಕ ನಮಾಜ್ ಮಾಡದೇ, ಮುಸ್ಲಿಂ ಬಾಂಧವರು ಮನೆಗಳಲ್ಲಿ ಪ್ರಾರ್ಥನೆ, ನಮಾಜ್ ಮಾಡಿದ್ದಾರೆ.
Recommended Video
ಮನೆಯ ಸದಸ್ಯರು ಸೇರಿಕೊಂಡು ಈದ್ ನಮಾಜ್ ಮಾಡಿ ಮನೆಯಲ್ಲಿಯೇ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡಿದ್ದಾರೆ. ರವಿವಾರ ಲಾಕ್ ಡೌನ್ ನಿಂದ ಸಂಪೂರ್ಣ ಬಂದ್ ಇರುವ ಹಿನ್ನೆಲೆಯಲ್ಲಿ ಮನೆಯಲ್ಲೇ ಈದ್ ಆಚರಣೆ ಆಚರಿಸಿದ್ದಾರೆ.
ಕಂಠಪೂರ್ತಿ ಕುಡಿದು ತೋಟಕ್ಕೆ ಆ್ಯಂಬುಲೆನ್ಸ್ ನುಗ್ಗಿಸಿದ
ಕರ್ನಾಟಕದಲ್ಲಿ ಭಾನುವಾರದ ಕರ್ಫ್ಯೂ ಜಾರಿಯಲ್ಲಿರುವ ಕಾರಣ. ಮನೆಯಲ್ಲೇ ಹಬ್ಬ ಆಚರಣೆ ಮಾಡುವಂತೆ ಉಡುಪಿ ಜಿಲ್ಲಾಡಳಿತದಿಂದ ಮನವಿ ಮಾಡಲಾಗಿದೆ. ಉಡುಪಿಯಲ್ಲಿ ಇಂದೇ ಈ ದುಲ್ ಫಿತರ್ ಆಚರಿಸಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ನಮಾಜ್ ನ ನೇರ ಪ್ರಸಾರದ ಕಾರ್ಯಕ್ರಮವನ್ನು ಟಿವಿ ನೋಡುತ್ತಾ ನಮಾಜ್ ಮಾಡುವ ಅವಕಾಶ ನೀಡಲಾಗಿದೆ.
ನಮಾಜ್ ನಂತರ ಪ್ರಾರ್ಥನಾ ವಿಧಿಗಳ ಪ್ರಕ್ರಿಯೆಯನ್ನು ಟಿವಿ ಮೂಲಕವೇ ಧರ್ಮ ಗುರುಗಳಿಂದ ಖುರಾನ್ ಪಠಣ ಮಾಡುತ್ತಿದ್ದಾರೆ.
ಉಡುಪಿಯ ಜಾಮಿಯಾ ಮಸೀದಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ.