ಉಡುಪಿಯಲ್ಲಿ ಪೊಲೀಸ್ ಸ್ಟೂಡೆಂಟ್ಸ್ ಗಾಗಿ "ತೆರೆದ ಮನೆ' ಇದು!
ಉಡುಪಿ, ಫೆಬ್ರವರಿ 28: ಪೊಲೀಸರೆಂದರೆ ಸಮಾಜಕ್ಕೆ ಒಂದು ರೀತಿಯ ಗೌರವ. ಇದು ಸಹಜವೂ ಕೂಡ. ಇದರ ಜೊತೆಗೆ ಪೊಲೀಸರೆಂದರೆ ಲಾಠಿ, ಪಿಸ್ತೂಲು ಹಿಡಿದು ಕಾನೂನು ಸುವ್ಯವಸ್ಥೆ ಕಾಪಾಡುವವರು ಎಂಬ ಕಾರಣಕ್ಕೆ ಜನ ಪೊಲೀಸರಿಂದ ದೂರವೇ ಇರುತ್ತಾರೆ. ವಿದ್ಯಾರ್ಥಿಗಳಿಗೆ ಮತ್ತು ಯಂಗ್ ಸ್ಟರ್ ಗಳಿಗಂತೂ ಪೊಲೀಸರ ಬಗ್ಗೆ ಎಲ್ಲಿಲ್ಲದ ಕುತೂಹಲ.
ಇಂತಹ ಕುತೂಹಲ ತಣಿಸುವ ಸಲುವಾಗಿಯೇ ಉಡುಪಿ ಪೊಲೀಸರು ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ. ಅದರ ಹೆಸರು ತೆರೆದ ಮನೆ.
ದಲಿತರಿಗೆ ಪ್ರತ್ಯೇಕ ಸ್ಮಶಾನ: ಏನಿದು ಸರಕಾರದ ಹೊಸ 'ನಾನ್ ಸೆನ್ಸ್' ಸುತ್ತೋಲೆ?
ಸಾರ್ವಜನಿಕರ ಜೊತೆ ಉತ್ತಮ ಸಂಪರ್ಕ ಬೆಳೆಸುವುದಕ್ಕೆ ಪೊಲೀಸ್ ಇಲಾಖೆ ಬೇರೆ ಬೇರೆ ಕಾರ್ಯಕ್ರಮ ರೂಪಿಸುತ್ತಲೇ ಇರುತ್ತದೆ. ಜನಸ್ನೇಹಿ ಆಗೋದಕ್ಕೆ ವರ್ಷದಲ್ಲಿ ಹಲವಾರು ಅಭಿಯಾನಗಳನ್ನು ಇಲಾಖೆ ನಡೆಸುತ್ತದೆ. ಉಡುಪಿಯಲ್ಲಿ ಪೊಲೀಸ್ ಇಲಾಖೆ "ತೆರೆದ ಮನೆ' ಅನ್ನುವ ವಿಭಿನ್ನ ಯೋಜನೆ ಆರಂಭಿಸಿದೆ.
ಪೊಲೀಸರು ಶಾಲಾ ಮಕ್ಕಳ ಜೊತೆ ಮತ್ತು ಮಕ್ಕಳು ಪೊಲೀಸ್ ಇಲಾಖೆಯ ಜೊತೆ ಬೆರೆಯೋದು ಈ ಯೋಜನೆಯ ಉದ್ದೇಶ. ಒಂದೊಂದು ಶಾಲೆಗೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಹೋಗಿ ಇಲಾಖೆ ಬಗ್ಗೆ ಮಕ್ಕಳಿಗೆ ಮಾಹಿತಿ ಕೊಟ್ಟು, ಮಕ್ಕಳ ಮೂಲಕ ಸಮಾಜದ ಜೊತೆ ಇಲಾಖೆ ಬೆರೆಯುವ ಕಾನ್ಸೆಪ್ಟ್ ಇದಾಗಿದೆ.
ಮಲೆನಾಡ ಮಡಿಲಲ್ಲಿ ಮಕ್ಕಳ ಸೆಳೆಯುತ್ತಿದೆ ಈ "ರೈಲು ಶಾಲೆ"
ಮಣಿಪಾಲದ ಮಾಧವ ಕೃಪ ಶಾಲೆಗೆ ಮಣಿಪಾಲ ಪೊಲೀಸರು ಭೇಟಿ ನೀಡಿ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪೊಲೀಸ್ ಇಲಾಖೆ, ಪೊಲೀಸ್ ಕೆಲಸದ ಬಗ್ಗೆ ತಮ್ಮ ಅನುಮಾನಗಳನ್ನು ಕ್ಲೀಯರ್ ಮಾಡಿಕೊಂಡರು.
ಈ ವೇಳೆ ಪೊಲೀಸ್ ನಾಯಿಗಳ ಪ್ರದರ್ಶನವೂ ನಡೆಯಿತು. ಅಧಿಕಾರಿಗಳು ಶ್ವಾನಗಳಿಗೆ ಕಲಿಸಿದ ಚಾಕಚಕ್ಯತೆ, ವಿಧ್ವಂಸಕ ಕೃತ್ಯಗಳನ್ನು ಶ್ವಾನಗಳು ಬಯಲಿಗೆಳೆಯುವ ಪ್ರಾತ್ಯಕ್ಷಿಕೆ ನಡೆಯಿತು. ನೂರಾರು ಮಕ್ಕಳು ಪೊಲೀಸರ ಜೊತೆ ಬೆರೆತು ಖುಷಿಪಟ್ಟರು.
ಸಮಾಜದಲ್ಲಿ ಅಪರಾಧ ಚಟುವಟಿಕೆಗಳು ನಡೆಯದಂತೆ ಶಾಲಾ ಮಕ್ಕಳನ್ನು ಬಳಸುವ ಯೋಚನೆ ಕೂಡಾ ಪೊಲೀಸರ ಬಳಿಯಲ್ಲಿದೆ. ಗಾಂಜಾ ಮತ್ತಿತರ ಅಮಲು ಸೇವನೆಯಿಂದ ಯುವ ಜನಾಂಗ ದಾರಿ ತಪ್ಪುತ್ತಿದ್ದು, ಅಕ್ರಮ ಅಡ್ಡೆಗಳ ಮಾಹಿತಿ ಸಂಗ್ರಹಿಸಲು ವಿದ್ಯಾರ್ಥಿಗಳೇ ಬೆಸ್ಟ್ ಎಂಬುದು ಪೊಲೀಸರ ಯೋಚನೆ.
ಈಗ ಮಕ್ಕಳ ಬಳಿ ಶಿಕ್ಷಕರು ಬಂದಿದ್ದು, ಮುಂದೆ ಪೊಲೀಸ್ ಠಾಣೆಗೆ ವಿದ್ಯಾರ್ಥಿಗಳು ಭೇಟಿ ಕೊಡಲಿದ್ದಾರೆ. ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ತೆರೆದ ಮನೆ ಕಾರ್ಯಕ್ರಮ ನಡೆಯಲಿದೆ. ಪೊಲೀಸರು ಮಾತ್ರ ಅಲ್ಲ, ಮಕ್ಕಳೂ ಕೂಡ ಅಕ್ರಮ ಚಟುವಟಿಕೆ ಮಾಡುವವರ ಜಾಲದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ.