ಟೀಕಿಸುವ ಭರದಲ್ಲಿ ಪ್ರಮೋದ್ ಮಧ್ವರಾಜ್ - ದಾವೂದ್ ಹೋಲಿಕೆ!
ಉಡುಪಿ, ಮಾರ್ಚ್ 17: ರಾಜ್ಯ ಯುವಜನ ಸೇವೆ ಸಚಿವ ಪ್ರಮೋದ್ ಮಧ್ವರಾಜ್ ಅವರ ಮೇಲೆ ಇತ್ತೀಚೆಗೆ ಕೆಲವು ಆರೋಪಗಳು ಕೇಳಿ ಬರುತ್ತಿದ್ದು, ಕೇಂದ್ರ ಹಣಕಾಸು ಸಂಸ್ಥೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ ನೀಡಿರುವ ದೂರಿನ ಮೇಲೆ ಕೇಸು ದಾಖಲಾಗಿದೆ. ಬ್ಯಾಂಕ್ ನಿಂದ ಸಚಿವ ಪ್ರಮೋದ್ ಮಧ್ವರಾಜ್ ಅಕ್ರಮವಾಗಿ ಸಾಲ ಪಡೆದಿರುವ ವಿಚಾರವಾಗಿ ಕೇಸು ದಾಖಲಾಗಿದ್ದು, ಕಡಿಮೆ ಸುತ್ತಿನ ಆಸ್ತಿಯನ್ನು ತೋರಿಸಿ 193 ಕೋಟಿ ರೂ. ಸಾಲ ಪಡೆದ ಹಿನ್ನಲೆಯಲ್ಲಿ ಕೇಸು ದಾಖಲಾಗಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಉಡುಪಿಯ ಸಿಂಡಿಕೇಟ್ ಬ್ಯಾಂಕಿಗೆ ಭೇಟಿ ನೀಡಿದ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಹಾಂ, 'ಸಾಲ ನೀಡಿರುವ ಆಧಾರಗಳನ್ನು ಕೇಳಿದಾಗ ಬ್ಯಾಂಕ್ ಅಧಿಕಾರಿಗಳು ವೈಯಕ್ತಿಕ ವಿಷಯವೆಂಬ ಕಾರಣಕ್ಕೆ ನಿರಾಕರಿಸಿದ್ದಾರೆ ಎಂದರು. ದೇಶದಲ್ಲಿ ಖುಷಿಯಾಗಿರುವವರು ಎಲ್ಲರೂ ನಿರಪರಾಧಿಗಳಲ್ಲ. ದಾವೂದ್ ಇಬ್ರಾಹಿಂ ಅಳೋದನ್ನು ನಾನು ನೋಡಿಲ್ಲ' ಎಂದು ಅವರು ಹೇಳಿದರು.
ಶರಣಾಗುತ್ತಾನಂತೆ ದಾವೂದ್ ಇಬ್ರಾಹಿಂ, ಆದರೆ ಷರತ್ತುಗಳು ಅನ್ವಯ!
ಪ್ರಮೋದ್ ಮಧ್ವರಾಜ್ ವಿರುದ್ಧ ವಾಗ್ದಾಳಿ ನಡೆಸಿದ ಅಬ್ರಹಾಂ, ಅವರನ್ನು ಟೀಕಿಸುವ ಭರದಲ್ಲಿ ಭುಗತ ಪಾತಕಿ ದಾವೂದ್ ಇಬ್ರಾಹಿಂ ಗೆ ಅವರನ್ನು ಹೋಲಿಸಿ ವಿವಾದ ಸೃಷ್ಟಿಸಿದ್ದಾರೆ. "ನಾನು ಹೇಳಿದ್ದು ಸುಳ್ಳು ಎಂದರೆ ಹಿಂಜರಿಯಲಾರೆ. ದಾಖಲೆ ಕೊಡುವಲ್ಲಿ ವಿಫಲರಾದರೆ ಬ್ಯಾಂಕ್ ವಿರುದ್ಧ 5 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವೆ' ಎಂದು ಅಬ್ರಾಹಂ ಗುಡುಗಿದ್ದಾರೆ.