ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಾದ್ಯಂತ ಆಟಿ ಅಮಾವಾಸ್ಯೆ ಸಂಭ್ರಮ: ವಿಶೇಷ ಕಷಾಯ ಸೇವನೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಜುಲೈ 20: ಆಷಾಢ ಅಮಾವಾಸ್ಯೆ ಎಂದರೆ ಕರಾವಳಿಯ ತುಳುವರ ಪಾಲಿಗೆ ಮಹತ್ವದ ದಿನ. ಈ ದಿವಸ ಮುಂಜಾನೆ ಎದ್ದು, ಹಾಲೆ ಮರದ ತೊಗಟೆಯ ಕಹಿಯಾದ ಕಷಾಯ ಕುಡಿದರೇನೇ ಈ ದಿನಕ್ಕೊಂದು ಸಾರ್ಥಕತೆ. ಆದರೆ ಯಾಕೆ ಈ ಕಷಾಯ ಕುಡಿಯುತ್ತಾರೆ? ಇದಕ್ಕೊಂದು ಹಿನ್ನೆಲೆ ಇದೆ.

Recommended Video

Drone Prathap ವಿರುದ್ಧ FIR ದಾಖಲು | Oneindia kannada

ತುಳುವರು ಆಟಿ ಎಂದು ಕರೆಯಲ್ಪಡುವ ಆಷಾಢ ಮಾಸದಲ್ಲಿ ವಿಪರೀತ ಮಳೆಯಾಗುತ್ತಿತ್ತು. ಮಳೆ ಎಂದ ಮೇಲೆ ಕೇಳಬೇಕೇ? ಮಳೆಯ ಜೊತೆಗೆ ಸಾಂಕ್ರಾಮಿಕ ರೋಗ, ರುಜಿನಗಳೂ ಸಹಜ. ಹಾಗಾಗಿ ರೋಗಗಳು ಬಾಧಿಸದೇ ಇರಲಿ ಎಂದು ತುಳುವರು ಹಾಲೆ ಮರದ ತೊಗಟೆಯ ಕಷಾಯ ಮಾಡಿ ಅಬಾಲವೃದ್ಧರಾದಿಯಾಗಿ ಎಲ್ಲರೂ ಬೆಳಿಗ್ಗೆ ಖಾಲಿ ಹೊಟ್ಟೆಗೆ ಕುಡಿಯುತ್ತಾರೆ. ತಾವೂ ಕುಡಿದು ನೆರೆ ಹೊರೆಯವರಿಗೂ ಕಷಾಯ ಹಂಚುವುದು ವಾಡಿಕೆ.

People Of Udupi Consumed Special Kashyaya On The Occassion Of Ati Amavasye

 ಕರಾವಳಿಯಲ್ಲಿ ಇಂದು 'ಆಟಿ ಅಮಾವಾಸ್ಯೆ'; ಹಾಲೆ ಕಷಾಯ ಸೇವಿಸಿದ ಕರಾವಳಿಗರು ಕರಾವಳಿಯಲ್ಲಿ ಇಂದು 'ಆಟಿ ಅಮಾವಾಸ್ಯೆ'; ಹಾಲೆ ಕಷಾಯ ಸೇವಿಸಿದ ಕರಾವಳಿಗರು

ಹೀಗಾಗಿ ಇಂದು ಉಡುಪಿಯೆಲ್ಲೆಡೆ ಗ್ರಾಮೀಣ ಭಾಗದ ಜನರು ಮುಂಜಾನೆ ಎದ್ದು ಹಾಲೆ ಮರದ ಕಷಾಯ ಸೇವಿಸಿದರು. ಅತ್ಯಂತ ಕಹಿಯಾದ ಈ ಕಷಾಯ ಹಲವು ರೋಗಗಳಿಗೆ ಔಷಧ ಎಂದು ಇಲ್ಲಿನ ಜನ ಭಾವಿಸುತ್ತಾರೆ.

People Of Udupi Consumed Special Kashyaya On The Occassion Of Ati Amavasye

ಉಡುಪಿಯ ಹಲವೆಡೆಗಳಲ್ಲಿ ಇಂದು ಹಾಲೆ ಮರದ ತೊಗಟೆ ಸೀಳಿ ಕಷಾಯ ಮಾಡಿ ಕುಡಿಯುವ ದೃಶ್ಯ ಕಂಡು ಬಂತು.

English summary
Ati amavasye is special for tulu people. Today People celebrated Ati Amavasya with consuming special kashaya
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X