ಕಾರ್ಕಳದಲ್ಲಿ ಫೆ.12ರಂದು ಉತ್ತರಕಾಂಡ ಕಾದಂಬರಿ ಸಮೀಕ್ಷೆ
ಕಾರ್ಕಳ, ಫೆಬ್ರವರಿ 9: ಎಸ್.ಎಲ್ ಭೈರಪ್ಪನವರ ಉತ್ತರಕಾಂಡ ಕಾದಂಬರಿಯ ಬಗ್ಗೆ ಒಂದು ಅವಲೋಕನ - ಸಮೀಕ್ಷೆ ಕಾರ್ಕಳದಲ್ಲಿ ಫೆ. 12ರಂದು ಜರುಗಲಿದೆ.
ಉಡುಪಿ ಜಿಲ್ಲೆಯ ಕಾರ್ಕಳದ, ಕಾರ್ಕಳ ಸಾಹಿತ್ಯ ಸಂಘವು ಹೋಟೆಲ್ ಪ್ರಕಾಶ್ ನ ಸಂಭ್ರಮ ಸಭಾಂಗಣದಲ್ಲಿ ಫೆ.12 ರಂದು ಭಾನುವಾರ ಸಂಜೆ 5 ಗಂಟೆಗೆ ಎಸ್ ಎಲ್. ಭೈರಪ್ಪ ಅವರ ಉತ್ತರಕಾಂಡ ಕಾದಂಬರಿಯ ಸಹೃದಯ ಸಮೀಕ್ಷೆಯನ್ನು ನಡೆಸಲು ಮುಂದಾಗಿದೆ.
ಇನ್ನು ಕಾರ್ಕಳ ಸಾಹಿತ್ಯ ಸಂಘವು- ವಿಶಂತಿ ವರ್ಷ(2016-17) ರ ಅಂಗವಾಗಿ ಸಮೀಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎನ್ನಲಾಗಿದೆ.
ಉತ್ತರಕಾಂಡ ಕಾದಂಬರಿಯ ಬಗ್ಗೆ ಒಂದು ಅವಲೋಕನ - ಸಮೀಕ್ಷೆ ಕಾರ್ಕಳದಲ್ಲಿ ಇದೇ ಭಾನುವಾರ ನಡೆಯಲಿದೆ. ಆಸಕ್ತರು ಗಮನಿಸಬಹುದು!#SLBhyrappa pic.twitter.com/OJU9IcB5PR
— SL Bhyrappa Quotes (@SLBhyrappa) February 8, 2017
Comments
English summary
Well known writer SL Bhyrappa's 'Uttarakanda' new novel review in Karkala, Udupi. Karkala Sahitya Sangha organized the program on Feb 12, Sunday evening.
Story first published: Thursday, February 9, 2017, 10:12 [IST]