ಉಡುಪಿ ಡಿಸಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸಿಂಪಲ್ ಮ್ಯಾರೇಜ್ ಸ್ಟೋರಿ
ಉಡುಪಿ, ಫೆಬ್ರವರಿ 26: ಇತ್ತೀಚೆಗಷ್ಟೇ ವ್ಯಾಲೆಂಟೈನ್ಸ್ ಡೇಯಂದು ದಾವಣಗೆರೆಯ ಜಿಲ್ಲಾಧಿಕಾರಿಯಾಗಿದ್ದ ಡಾ ಬಗಾದಿ ಗೌತಮ್ ಮತ್ತು ದಾವಣಗೆರೆ ಜಿಪಂ ಸಿಇಒ ಆಗಿದ್ದ ಅಶ್ವತಿ ದಾಂಪತ್ಯ ಜೀವನಕ್ಕೆ ಕಾಲಿರಿಸಿ ಸುದ್ದಿಯಾಗಿದ್ದರು. ಈಗ ರಾಜ್ಯದಲ್ಲಿ ಮತ್ತೊರ್ವ ಐಎಎಸ್ ಅಧಿಕಾರಿಗಳ ಮದುವೆ ಸದ್ದುಮಾಡಿದೆ. ಆದರೆ ಈ ವಿವಾಹ ಅತ್ಯಂತ ಸರಳವಾಗಿ ನಡೆದಿರುವುದು ವಿಶೇಷ.
ಪ್ರೀತಿಸಿ ವಿವಾಹವಾದ ರಾಜ್ಯದ ಮತ್ತಿಬ್ಬರು ಐಎಎಸ್ ಅಧಿಕಾರಿಗಳು
ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಸಿದ್ದು, ಅವರು ಬಾಗಲಕೋಟೆಯ ಕೃಷ್ಣಾ ಮೇಲ್ದಂಡೆ ಯೋಜನೆ ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಆಯುಕ್ತ ಉಜ್ವಲ್ ಕುಮಾರ್ ಘೋಷ್ ಜೊತೆ ಸರಳ ವಿವಾಹವಾಗಿದ್ದಾರೆ.
ಪ್ರೀತಿಸಿ ಮದುವೆಯಾಗಿದ್ದ ಐಎಎಸ್ ಅಧಿಕಾರಿಗಳು ಚಿಕ್ಕಮಗಳೂರಿಗೆ ವರ್ಗ
ಉಜ್ವಲ್ ಕುಮಾರ್ ಘೋಷ್ ಪಶ್ಚಿಮ ಬಂಗಾಲ ಗಡಿಯಾದ ಸಾಹಿಬ್ಗಂಜ್ ನ ಬಂಗಾಲಿ ಮೂಲದವರು. 2008ರ ಬ್ಯಾಚ್ ನ ಐಎಎಸ್ ಅಧಿಕಾರಿ. ಆಂಧ್ರಪ್ರದೇಶ ವಿಜಯವಾಡ ಮೂಲದ ಕೊರ್ಲಪಾಟಿ 2011ರ ಬ್ಯಾಚ್ ಐಎಎಸ್ ಅಧಿಕಾರಿಯಗಿದ್ದಾರೆ.
ಹುಬ್ಬಳ್ಳಿಯ ವಿವಾಹ ನೋಂದಣಿ ಕಚೇರಿಯಲ್ಲಿ ನಿನ್ನೆ ಕುಟುಂಬ ಸದಸ್ಯರು ಹಾಗೂ ಆಯ್ದ ಗಣ್ಯರ ಸಮ್ಮುಖದಲ್ಲಿ ಉಜ್ವಲ್ ಕುಮಾರ್ ಘೋಷ್ ಮತ್ತು ಹೆಪ್ಸಿಬಾ ರಾಣಿ ಕೊರ್ಲಪಾಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಹಿರಿಯ ಐಎಎಸ್ ಅಧಿಕಾರಿಗಳಾದ ಆರ್. ವಿಶಾಲ್, ಪಿ.ಸಿ. ಜಾಫರ್, ಸುನಿಲ್ ಪನ್ವಾರ್, ಸುಶೀಲಾ ಈ ಮದುವೆಗೆ ಸಾಕ್ಷಿಗಳಾಗಿ ದಾಖಲೆಗೆ ಸಹಿ ಹಾಕಿದರು.
ಪ್ರೇಮಿಗಳ ದಿನದಂದು ಸಪ್ತಪದಿ ತುಳಿಯಲಿದ್ದಾರೆ ದಾವಣಗೆರೆ ಡಿಸಿ, ಜಿಲ್ಲಾ ಪಂಚಾಯಿತಿ ಸಿಇಓ
ಈ ಇಬ್ಬರು ಐಎಎಸ್ ಅಧಿಕಾರಿಗಳು ಒಂದು ತಿಂಗಳ ಹಿಂದೆಯೇ ನೋಂದಣಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಮದುವೆಗೆ ರಜೆ ತೆಗೆದುಕೊಂಡು ಬಂದು ವಿವಾಹವಾದ್ದಾರೆ. ಸರಳ ರೀತಿ ಯಲ್ಲಿ ಮದುವೆಯಾಗಬೇಕೆಂದಿದ್ದ ಈ ಇಬ್ಬರು ಅಧಿಕಾರಿಗಳು ಅದರಂತೆ ನಡೆದುಕೊಂಡಿದ್ದಾರೆ ಕೂಡ.