ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾರವಾರ-ಬೆಂಗಳೂರು ರೈಲು ಪ್ರಯಾಣ ಅವಧಿ ಕಡಿತ?

|
Google Oneindia Kannada News

ಉಡುಪಿ, ಫೆಬ್ರವರಿ 09; ಕಾರವಾರ-ಬೆಂಗಳೂರು ನಡುವೆ ಸಂಚಾರ ನಡೆಸುವ ರೈಲಿನ ಪ್ರಯಾಣದ ಅವಧಿ ಕಡಿತಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಈ ರೈಲು ಬೆಳಗ್ಗೆ 8ಗಂಟೆಗೆ ಬೆಂಗಳೂರು ನಗರವನ್ನು ತಲುಪುತ್ತಿದೆ.

2020ರಲ್ಲಿ ಕಾರವಾರ-ಬೆಂಗಳೂರು ರೈಲು ಆರಂಭಗೊಂಡಿತ್ತು. ಪಡೀಲು ಮಾರ್ಗವಾಗಿ ಈ ರೈಲು ಸಂಚಾರ ನಡೆಸಲಿದೆ. ಈ ರೈಲಿಗೆ ಉತ್ತಮವಾದ ಸ್ಪಂದನೆ ಸಹ ವ್ಯಕ್ತವಾಗಿದೆ.

ತಿರುವನಂತಪುರ-ಕಾಸರಗೋಡು ನಡುವೆ ಸೆಮಿ ಹೈಸ್ಪೀಡ್ ರೈಲು ತಿರುವನಂತಪುರ-ಕಾಸರಗೋಡು ನಡುವೆ ಸೆಮಿ ಹೈಸ್ಪೀಡ್ ರೈಲು

ಕಾರವಾರ, ಉಡುಪಿ, ಕುಂದಾಪುರ ಭಾಗದ ಜನರು ಈ ರೈಲಿನ ಮೂಲಕ ರಾಜಧಾನಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಆದರೆ, ರೈಲಿನ ಪ್ರಯಾಣದ ಅವಧಿ ಬಗ್ಗೆ ಅಸಮಾಧಾವಿದೆ.

ಬಜೆಟ್; ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗಕ್ಕೆ 100 ಕೋಟಿ ಬಜೆಟ್; ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗಕ್ಕೆ 100 ಕೋಟಿ

 Shobha Karandlaje Demand For Cut Of Travel Time Of Bengaluru Karwar Train

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ನೈಋತ್ಯ ರೈಲ್ವೆಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಈ ರೈಲು ಬೆಂಗಳೂರು ತಲುಪುವಾಗ ಬೆಳಗ್ಗೆ 8ಗಂಟೆಯಾಗುತ್ತಿದೆ. 7.15ಕ್ಕೆ ತಲುಪುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಪ್ರತಿಭಟನೆ ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗ; ರೈತರ ಪ್ರತಿಭಟನೆ

ಈ ರೈಲಿನಲ್ಲಿ ಬಹುತೇಕ ಸೀಟುಗಳು ವೈಟಿಂಗ್ ಇರುತ್ತವೆ. ಇಲ್ಲಿನ ಭಾಗದವರಿಗೆ ಹೆಚ್ಚಿನ ಸೀಟುಗಳು ಸಿಗಬೇಕು ಅದಕ್ಕಾಗಿ ರೈಲನ್ನು ಗೋವಾ ತನಕ ಸಂಚಾರ ನಡೆಸದೇ ಕಾರವಾರಕ್ಕೆ ಅಂತ್ಯಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.

Recommended Video

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಉದಯ-ವಿರೂಪಾಕ್ಷೇಶ್ವರನ ದರ್ಶನ ಪಡೆದ ಆನಂದ್ ಸಿಂಗ್ | Oneindia Kannada

ಕಾರವಾರ-ಬೆಂಗಳೂರು ರೈಲಿಗೆ ಫೆ.26ರಿಂದ ಫಸ್ಟ್ ಕ್ಲಾಸ್ ಎಸಿ ಬೋಗಿ ಜೋಡಣೆಯಾಗಲಿದೆ. ಬಳಿಕ ಕೈಗಾದ ಅಧಿಕಾರಿಗಳು ಹೆಚ್ಚಾಗಿ ರೈಲನ್ನು ಬಳಕೆ ಮಾಡುವ ನಿರೀಕ್ಷೆಯೂ ಇದೆ.

English summary
In a letter to south western railway Udupi-Chikkamagaluru MP Shobha Karandlaje demand to cut travel time of Bengaluru-Karwar train via Padil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X