ಉಡುಪಿಯ ಶಂಕರಪುರ ಮಲ್ಲಿಗೆ ಕೊಳ್ಳುವವರಿಗೆ ಇದು ಸುಭಿಕ್ಷಕಾಲ
ಉಡುಪಿ, ಜನವರಿ 27: ಉಡುಪಿ ಸಮೀಪದ "ಶಂಕರ ಪುರ" ಮಲ್ಲಿಗೆ ಕೃಷಿಗೆ ಬಾರೀ ಹೆಸರು. ಶಂಕರಪುರ ಮಲ್ಲಿಗೆಗೆ ಚಳಿ ಇದ್ದಾಗ ಅತ್ಯಧಿಕವಿದ್ದ ದರ ಕಳೆದೆರಡು ದಿನಗಳಿಂದ ಸೆಖೆ ಆರಂಭವಾದ ಹಿನ್ನಲೆಯಲ್ಲಿ ಶೇ. 121ರಷ್ಟು ಕುಸಿದಿದೆ. ಹೀಗಾಗಿ ಮಲ್ಲಿಗೆಯನ್ನು ಕೊಳ್ಳುವವರಿಗೆ ಸುಭಿಕ್ಷ ಕಾಲದಂತೆ ಪರಿಣಮಿಸಿದೆ.
ನವೆಂಬರ್ ಅಂತ್ಯಕ್ಕೆ ಏರಿಕೆಯಾದ ಶಂಕರಪುರ ಮಲ್ಲಿಗೆ ದರ (ಪ್ರತಿ ಅಟ್ಟೆಗೆ) 820, 720, 630 ರೂ. ಆಸುಪಾಸಿನಿಂದ ಕೆಳಗಿಳಿದಿರಲಿಲ್ಲ. ಚಳಿ ಹೆಚ್ಚಿದಾಗ ಶುಭಸಮಾರಂಭಗಳೂ ಹೆಚ್ಚಿದ್ದವು ಆದ್ದರಿಂದ ಮಲ್ಲಿಗೆಗೆ ಬೇಡಿಕೆ ಇತ್ತು. ಹಾಗಾಗಿ ದರದಲ್ಲಿ ಏರಿಕೆಯಾಗಿತ್ತು . ಆದರೆ ಜನವರಿ 21 ರಿಂದ ಚಳಿ ಕಡಿಮೆಯಾಗಿದ್ದು ಸೆಖೆ ಶುರುವಾಗಿದೆ. ಶುಭ ಸಮಾರಂಭಗಳೂ ವಿರಳವಾಗಿವೆ.[ಉಡುಪಿ ಮಾರುಕಟ್ಟೆಯಲ್ಲಿ ಕುಸಿದ ಶಂಕರಪುರ ಮಲ್ಲಿಗೆ ದರ]
ಶಂಕರಪುರ ಕಟ್ಟೆಯಲ್ಲಿ ನಿತ್ಯ ಬೆಳಿಗ್ಗೆ ೧೧ಕ್ಕೆ ದರ ಹರಾಜು ಹಾಕಿ ಮಲ್ಲಿಗೆ ಹೂ ಅಟ್ಟಿಯನ್ನು ಅಂಗಡಿಗಳಿಗೆ ಪೂರೈಸಲಾಗುತ್ತದೆ. ಆದರೆ ಇದೀಗ ಮಲ್ಲಿಗೆ ದರ ಕುಸಿತವಾಗಿದ್ದು , ಮಲ್ಲಿಗೆ ವ್ಯಾಪಾರಿಗಳು ಕಷ್ಟಕ್ಕೆ ಸಿಲುಕಿದ್ದಾರೆ. ಇದಲ್ಲದೆ ಚಳಿಯಿಂದಾಗಿ ಕಾಕಡ, ಗೊಂಡೆ, ಸೇವಂತಿಗೆ ಸಹಿತ ಹೂಗಳು ಮಾರುಕಟ್ಟೆಗೆ ಪೂರೈಕೆಯಾಗುತ್ತಿದ್ದು ದರ ಶೇ. ೫೦ ರಿಂದ ೮೦ರಷ್ಟು ಕುಸಿತ ಕಂಡಿದೆ.
ಶಂಕರಪುರ
ಮಲ್ಲಿಗೆ
ದರ
ವಿವರ:
ಜನವರಿ
20-820
ರು
ಜನವರಿ
21-820
ರು
ಜನವರಿ
22-820
ರು
ಜನವರಿ
23-370
ರು
ಜನವರಿ
24-370
ರು