ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ತಾಲ್ಲೂಕು ಅರಣ್ಯಾಧಿಕಾರಿ-ಶಾಸಕ ನಡುವೆ ಜಟಾಪಟಿ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಫೆಬ್ರವರಿ 24: ಬ್ರಹ್ಮಾವರ ವ್ಯಾಪ್ತಿಯ ಕುಂಜಾಲು ರಸ್ತೆ ಅಗಲೀಕರಣ ಮತ್ತು ಮರ ತೆರವು ವಿಚಾರಕ್ಕೆ ಸಂಬಂಧಿಸಿ ಶಾಸಕರು ಮತ್ತು ಅರಣ್ಯಾಧಿಕಾರಿ ನಡುವೆ ಜಟಾಪಟಿ ನಡೆದಿದೆ.

ಇಂದು ಉಡುಪಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ರಘುಪತಿ ಭಟ್ ಮತ್ತು ಹೆಬ್ರಿ ವಲಯಾಧಿಕಾರಿ ಮುನಿರಾಜು ಅವರ ನಡುವಿನ ಮಾತಿನ ಚಕಮಕಿ ಸಾಕ್ಷಿಯಾಯಿತು.

ಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಧರಣಿಗೆ ಅನುಮತಿ‌ ಇಲ್ಲಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಧರಣಿಗೆ ಅನುಮತಿ‌ ಇಲ್ಲ

ಈ ಸಂದರ್ಭ ಅರಣ್ಯಾಧಿಕಾರಿ ಅವರು ಅಗೌರವ ತೋರಿದ್ದಾರೆ ಎಂದು ಶಾಸಕ ರಘುಪತಿ ಭಟ್ ಅರಣ್ಯ ಅಧಿಕಾರಿ ವಿರುದ್ಧ ಕೆಂಡಾಮಂಡಲವಾದರು. ನಾನು ಅಗೌರವ ತೋರಿಲ್ಲ, ನಾನು ಸರ್ಕಾರಿ ಇಲಾಖೆಯ ಅಧಿಕಾರಿ, ನೀವು ಗೌರವ ಕೊಟ್ಟು ಮಾತನಾಡಿ ಎಂದು ಅರಣ್ಯಾಧಿಕಾರಿ ಶಾಸಕರಿಗೆ ಹೇಳಿದರು.

Quarrel Between Udupi Taluk Forest Officer And MLA

ಅಧಿಕಾರಿಯ ಈ ಮಾತಿಗೆ ಮತ್ತಷ್ಟು ಕೆರಳಿದ ಶಾಸಕರು ಜನಪ್ರತಿನಿಧಿಯ ಸಾಲಿನಲ್ಲಿ ಕುಳಿತ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಗುಡುಗಿದರು. ನಂತರ ಅಧಿಕಾರಿಗಳ ಸಾಲಿನಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಮುನಿರಾಜ್ ಅಧಿಕಾರಿಗಳ ಸಾಲಿನಲ್ಲಿ ಕುಳಿತ ನಂತರ ಶಾಸಕರು ಹಾಗೂ ಅಧಿಕಾರಿಯ ಜಟಾಪಟಿ ಮುಂದುವರಿಯಿತು.

English summary
Clash between Udupi MLA and forest Officer, Issue of timber clearance of the Kunjulu road in the Brahmavara range.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X