ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ಫಾಸ್ಟ್‌ ಟ್ಯಾಗ್ ವಿನಾಯಿತಿ ರದ್ದು ಭೀತಿ, ಹೋರಾಟದ ಕಾವು!

By ರಹೀಂ ಉಜಿರೆ
|
Google Oneindia Kannada News

ಉಡುಪಿ, ಫೆಬ್ರವರಿ 18; ದೇಶಾದ್ಯಂತ ಫಾಸ್ಟ್ ಟ್ಯಾಗ್ ಕಡ್ಡಾಯಗೊಳ್ಳುತ್ತಿಂತೆಯೇ ಟೋಲ್ ಗೇಟ್‌ಗಳಿರುವ ಊರುಗಳಲ್ಲಿ ಸ್ಥಳೀಯರಿಗೆ ನೀಡಲಾಗುತ್ತಿದ್ದ ವಿನಾಯಿತಿಯನ್ನು ರದ್ದು ಮಾಡುವ ಹುನ್ನಾರ ನಡೆಯುತ್ತಿದೆ. ಈ ಸಂಬಂಧ ಉಡುಪಿ ಜಿಲ್ಲೆಯಲ್ಲಿಯೂ ಸ್ಥಳೀಯರು ಹೋರಾಟದ ಹಾದಿ ಹಿಡಿದಿದ್ದು, ದಿನೇ ದಿನೇ ಪ್ರತಿಭಟನೆ ಕಾವು ಹೆಚ್ಚುತ್ತಿದೆ.

ಉಡುಪಿ ಜಿಲ್ಲೆಯಲ್ಲಿ ಸದ್ಯ 2 ಟೋಲ್ ಗೇಟ್ ಗಳಿವೆ. ಒಂದು ಹೆಜಮಾಡಿ, ಇನ್ನೊಂದು ಸಾಸ್ತಾನ. ಸಾಸ್ತಾನದ ಟೋಲ್ ಪೇಟೆಯ ಆಸುಪಾಸಿನಲ್ಲೇ ಇದ್ದು ಟೋಲ್ ವಿನಾಯಿತಿ ರದ್ದು ಮಾಡಿದರೆ ಸಾಕಷ್ಟು ಜನ ತೊಂದರೆಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳ ಫೆ. 22 ರಂದು ಸಾಸ್ತಾನದಲ್ಲಿ ಸ್ಥಳೀಯರು ಬಂದ್‌ಗೆ ಕರೆ ನೀಡಿದ್ದು, ಹೋರಾಟವನ್ನು ತೀವ್ರಗೊಳಿಸಿದ್ದಾರೆ.

ಸುರತ್ಕಲ್ ಟೋಲ್ ಗೇಟ್ ರದ್ದು; ಸಚಿವ ಗಡ್ಕರಿ ಭರವಸೆ ಸುರತ್ಕಲ್ ಟೋಲ್ ಗೇಟ್ ರದ್ದು; ಸಚಿವ ಗಡ್ಕರಿ ಭರವಸೆ

ಕರಾವಳಿಯಲ್ಲಿ ನವಯುಗ ಕಂಪನಿಯು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದಿತ್ತು. ಅದರಂತೆ ಸಂಸ್ಥೆಯು ಟೋಲ್ ಸಂಗ್ರಹ ಮಾಡುತ್ತಿದೆ. ಈ ತನಕ ಹಲವು ಹೋರಾಟಗಳ ಬಳಿಕ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ ಸ್ಥಳೀಯರಿಗೆ ವಿನಾತಿಯಿ ಅಥವಾ ರಿಯಾಯಿತಿ ದರ ನೀಡಲಾಗುತ್ತಿತ್ತು. ಆದರೆ ಇದೀಗ ಫಾಸ್ಟ್ ಟ್ಯಾಗ್ ಕಡ್ಡಾಯ ನೆಪದಲ್ಲಿ ವಿನಾಯಿತಿ ರದ್ದು ಮಾಡುವ ಹುನ್ನಾರ ನಡೆದಿದೆ.

ಫಾಸ್ಟ್ಯಾಗ್ ಸೃಷ್ಟಿಸಿದ ಗೊಂದಲ: ಟೋಲ್ ಪ್ಲಾಜಾಗಳಲ್ಲಿ ಗದ್ದಲಫಾಸ್ಟ್ಯಾಗ್ ಸೃಷ್ಟಿಸಿದ ಗೊಂದಲ: ಟೋಲ್ ಪ್ಲಾಜಾಗಳಲ್ಲಿ ಗದ್ದಲ

Protest In Udupi Sasthana And Hejamady Tollgates

ಸ್ಥಳೀಯರು ಮತ್ತು ಹೋರಾಟಗಾರರು ಹೇಳುವ ಪ್ರಕಾರ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿಲ್ಲ. ದಾರಿದೀಪ ಅಳವಡಿಕೆ, ಸರ್ವಿಸ್ ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಗುತ್ತಿಗೆದಾರರು ಇನ್ನೂ ಪೂರ್ಣಗೊಳಿಸಿಲ್ಲ.

2 ವರ್ಷಗಳಲ್ಲಿ ಹೆದ್ದಾರಿಗಳು ಟೋಲ್ ಪ್ಲಾಜಾ ಮುಕ್ತ: ಜಿಪಿಎಸ್ ವ್ಯವಸ್ಥೆಗೆ ಮುಂದಾದ ಸರ್ಕಾರ2 ವರ್ಷಗಳಲ್ಲಿ ಹೆದ್ದಾರಿಗಳು ಟೋಲ್ ಪ್ಲಾಜಾ ಮುಕ್ತ: ಜಿಪಿಎಸ್ ವ್ಯವಸ್ಥೆಗೆ ಮುಂದಾದ ಸರ್ಕಾರ

Recommended Video

Amit Shah ಸವಾಲೆಸೆದ ಮಮತಾ ಬ್ಯಾನರ್ಜಿ, ಪ.ಬಂಗಾಳದಲ್ಲಿ ಮುಂದುವರೆದ ವಾಕ್‌ ಸಮರ | Oneindia Kannada

ಈ ಹಿಂದೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಸ್ಥಳೀಯರ ನಡುವೆ ನಡೆದ ಹಲವು ಸಭೆಗಳಲ್ಲಿ ಸಾಕಷ್ಡು ಭರವಸೆಗಳನ್ನು ಸ್ಥಳೀಯರಿಗೆ ನೀಡಲಾಗಿತ್ತು. ಆ ಭರವಸೆಗಳು ಇನ್ನೂ ಈಡೇರಿಲ್ಲ. ಹೀಗಿದ್ದರೂ ದಿನಕ್ಕೆ ಹತ್ತಾರು ಬಾರಿ ಟೋಲ್ ಗಳಲ್ಲಿ ಓಡಾಡುವ ಜನರಿಂದ ಹಣ ಪೀಕಿಸುವ ಹುನ್ನಾರ ನಡೆದಿದೆ. ಹೀಗಾಗಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ನಾಗರಿಕರನ್ನು ಹೋರಾಟಕ್ಕಿಳಿಯುವಂತೆ ಮಾಡಿದೆ.

English summary
After the fastag mandatory local people of Udupi district Sasthana and Hejamady tollgates surrounding areas protesting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X