ಉಡುಪಿ; ಫಾಸ್ಟ್ ಟ್ಯಾಗ್ ವಿನಾಯಿತಿ ರದ್ದು ಭೀತಿ, ಹೋರಾಟದ ಕಾವು!
ಉಡುಪಿ, ಫೆಬ್ರವರಿ 18; ದೇಶಾದ್ಯಂತ ಫಾಸ್ಟ್ ಟ್ಯಾಗ್ ಕಡ್ಡಾಯಗೊಳ್ಳುತ್ತಿಂತೆಯೇ ಟೋಲ್ ಗೇಟ್ಗಳಿರುವ ಊರುಗಳಲ್ಲಿ ಸ್ಥಳೀಯರಿಗೆ ನೀಡಲಾಗುತ್ತಿದ್ದ ವಿನಾಯಿತಿಯನ್ನು ರದ್ದು ಮಾಡುವ ಹುನ್ನಾರ ನಡೆಯುತ್ತಿದೆ. ಈ ಸಂಬಂಧ ಉಡುಪಿ ಜಿಲ್ಲೆಯಲ್ಲಿಯೂ ಸ್ಥಳೀಯರು ಹೋರಾಟದ ಹಾದಿ ಹಿಡಿದಿದ್ದು, ದಿನೇ ದಿನೇ ಪ್ರತಿಭಟನೆ ಕಾವು ಹೆಚ್ಚುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಸದ್ಯ 2 ಟೋಲ್ ಗೇಟ್ ಗಳಿವೆ. ಒಂದು ಹೆಜಮಾಡಿ, ಇನ್ನೊಂದು ಸಾಸ್ತಾನ. ಸಾಸ್ತಾನದ ಟೋಲ್ ಪೇಟೆಯ ಆಸುಪಾಸಿನಲ್ಲೇ ಇದ್ದು ಟೋಲ್ ವಿನಾಯಿತಿ ರದ್ದು ಮಾಡಿದರೆ ಸಾಕಷ್ಟು ಜನ ತೊಂದರೆಗೊಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಇದೇ ತಿಂಗಳ ಫೆ. 22 ರಂದು ಸಾಸ್ತಾನದಲ್ಲಿ ಸ್ಥಳೀಯರು ಬಂದ್ಗೆ ಕರೆ ನೀಡಿದ್ದು, ಹೋರಾಟವನ್ನು ತೀವ್ರಗೊಳಿಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ರದ್ದು; ಸಚಿವ ಗಡ್ಕರಿ ಭರವಸೆ
ಕರಾವಳಿಯಲ್ಲಿ ನವಯುಗ ಕಂಪನಿಯು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಗುತ್ತಿಗೆ ಪಡೆದಿತ್ತು. ಅದರಂತೆ ಸಂಸ್ಥೆಯು ಟೋಲ್ ಸಂಗ್ರಹ ಮಾಡುತ್ತಿದೆ. ಈ ತನಕ ಹಲವು ಹೋರಾಟಗಳ ಬಳಿಕ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿ ಸ್ಥಳೀಯರಿಗೆ ವಿನಾತಿಯಿ ಅಥವಾ ರಿಯಾಯಿತಿ ದರ ನೀಡಲಾಗುತ್ತಿತ್ತು. ಆದರೆ ಇದೀಗ ಫಾಸ್ಟ್ ಟ್ಯಾಗ್ ಕಡ್ಡಾಯ ನೆಪದಲ್ಲಿ ವಿನಾಯಿತಿ ರದ್ದು ಮಾಡುವ ಹುನ್ನಾರ ನಡೆದಿದೆ.
ಫಾಸ್ಟ್ಯಾಗ್ ಸೃಷ್ಟಿಸಿದ ಗೊಂದಲ: ಟೋಲ್ ಪ್ಲಾಜಾಗಳಲ್ಲಿ ಗದ್ದಲ
ಸ್ಥಳೀಯರು ಮತ್ತು ಹೋರಾಟಗಾರರು ಹೇಳುವ ಪ್ರಕಾರ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯೇ ಇನ್ನೂ ಪೂರ್ಣಗೊಂಡಿಲ್ಲ. ದಾರಿದೀಪ ಅಳವಡಿಕೆ, ಸರ್ವಿಸ್ ರಸ್ತೆ ನಿರ್ಮಾಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಗುತ್ತಿಗೆದಾರರು ಇನ್ನೂ ಪೂರ್ಣಗೊಳಿಸಿಲ್ಲ.
2 ವರ್ಷಗಳಲ್ಲಿ ಹೆದ್ದಾರಿಗಳು ಟೋಲ್ ಪ್ಲಾಜಾ ಮುಕ್ತ: ಜಿಪಿಎಸ್ ವ್ಯವಸ್ಥೆಗೆ ಮುಂದಾದ ಸರ್ಕಾರ
Recommended Video
ಈ ಹಿಂದೆ ಜಿಲ್ಲಾಡಳಿತ, ಜನಪ್ರತಿನಿಧಿಗಳು ಮತ್ತು ಸ್ಥಳೀಯರ ನಡುವೆ ನಡೆದ ಹಲವು ಸಭೆಗಳಲ್ಲಿ ಸಾಕಷ್ಡು ಭರವಸೆಗಳನ್ನು ಸ್ಥಳೀಯರಿಗೆ ನೀಡಲಾಗಿತ್ತು. ಆ ಭರವಸೆಗಳು ಇನ್ನೂ ಈಡೇರಿಲ್ಲ. ಹೀಗಿದ್ದರೂ ದಿನಕ್ಕೆ ಹತ್ತಾರು ಬಾರಿ ಟೋಲ್ ಗಳಲ್ಲಿ ಓಡಾಡುವ ಜನರಿಂದ ಹಣ ಪೀಕಿಸುವ ಹುನ್ನಾರ ನಡೆದಿದೆ. ಹೀಗಾಗಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನದ ನಾಗರಿಕರನ್ನು ಹೋರಾಟಕ್ಕಿಳಿಯುವಂತೆ ಮಾಡಿದೆ.