ಮುಂಬೈ ಉದ್ಯಮಿ ಕೊಲೆ ಪ್ರಕರಣ: ಹೋಟೆಲ್ ಸಪ್ಲೈಯರ್ ಸೇರಿ ನಾಲ್ವರ ಬಂಧನ
ಉಡುಪಿ, ಫೆಬ್ರವರಿ 12: ಮುಂಬೈನ ಬಾರ್ ಮಾಲೀಕ ವಶಿಷ್ಟ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು, ಅದೇ ಬಾರ್ ನ ಸಪ್ಲೈಯರ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ವಶಿಷ್ಟ ಯಾದವ್ ಮಾಲೀಕತ್ವದ ಮಾಯಾ ಡೇ ಲೇಡಿಸ್ ಬಾರ್ ಅಂಡ್ ರೆಸ್ಟೋರೆಂಟ್ ಸಿಬ್ಬಂದಿ ಮೂಲತಃ ದಿಲ್ಲಿ ನಿವಾಸಿ ಸುಮಿತ್ ಮಿಶ್ರಾ, ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಉಡುಪಿಯ ಎಕೆಎಂಎಸ್ ಬಸ್ ಕಂಪನಿಯ ಸಿಬ್ಬಂದಿಗಳಾದ ಅಬ್ದುಲ್ ಶಕೂರ್, ಅವಿನಾಶ್ ಕರ್ಕೇರ, ಮಹಮ್ಮದ್ ಶರೀಫ್ ಬಂಧಿತ ಇತರೆ ಆರೋಪಿಗಳಾಗಿದ್ದಾರೆ.
ರಾಮನಗರದಲ್ಲಿ ಹಾಡಹಗಲೇ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷನ ಕೊಲೆ
ನ್ಯೂ ಮುಂಬಯಿಯಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ವಶಿಷ್ಟ ಉಡುಪಿಗೆ ಆಗಮಿಸಿದ್ದು ಏಕೆ? ಉಡುಪಿಯ ಕುಕ್ಕೆಹಳ್ಳಿ ಗ್ರಾಮಕ್ಕೆ ವಶಿಷ್ಟ ತಾನಾಗೆ ಆಗಮಿಸಿದ್ದಾ ಅಥವಾ ಆರೋಪಿಗಳೇ ಕೊಂದು ಕುಕ್ಕೆಹಳ್ಳಿಯಲ್ಲಿ ಎಸೆದು ಹೋದರಾ ಎಂಬುದು ಇನ್ನಷ್ಟೇ ತನಿಖೆಯಿಂದ ಗೊತ್ತಾಗಬೇಕಿದೆ. ಜೊತೆಗೆ ಕೊಲೆಗೆ ಕಾರಣ ಏನು ಅನ್ನುವುದು ಇನ್ನಷ್ಟೇ ಬಹಿರಂಗವಾಗಬೇಕಿದೆ.
ತನಿಖೆಗಾಗಿ ಪೊಲೀಸರು ಎರಡು ತಂಡ ರಚನೆ ಮಾಡಿದ್ದಾರೆ. ವಶಿಷ್ಟ ಸತ್ಯನಾರಾಯಣನ ಶವವು ಎರಡು ದಿನಗಳ ಹಿಂದೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ಬೈರಂಪಳ್ಳಿಯಲ್ಲಿ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.