ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ; ಟೆಸ್ಟ್ ರೈಡ್ ಗೆಂದು ತೆಗೆದುಕೊಂಡ ಬೈಕ್ ಜೊತೆ ಎಸ್ಕೇಪ್

By Lekhaka
|
Google Oneindia Kannada News

ಉಡುಪಿ, ನವೆಂಬರ್ 03: ಹಳೆಯ ಬೈಕ್ ಖರೀದಿಸುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಟೆಸ್ಟ್ ರೈಡ್ ಮಾಡಿಕೊಂಡು ಬರುತ್ತೇನೆಂದು ಹೇಳಿ ಬೈಕ್ ಕದ್ದು ಪರಾರಿಯಾಗಿರುವ ಘಟನೆ ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ನ್ಯೂ ಮಣಿಪಾಲ್ ಬಜಾರ್ ನಲ್ಲಿ ನಡೆದಿದೆ.

ಹೆರ್ಗದ ತ್ರಿಶಂಕು ನಗರ ನಿವಾಸಿ ಪ್ರಶಾಂತ್ ಕುಮಾರ್ ಎಂಬುವರು ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ನ್ಯೂ ಮಣಿಪಾಲ್ ಬಜಾರ್ ಎಂಬ ಸೆಕೆಂಡ್ ಹ್ಯಾಂಡ್ ಬೈಕ್ ಮಳಿಗೆ ಇಟ್ಟುಕೊಂಡಿದ್ದಾರೆ.

ಬೈಕ್‌ ಕದ್ದು 2 ವಾರದಲ್ಲಿ ಮಾಲೀಕರಿಗೆ ಪಾರ್ಸೆಲ್ ಮಾಡಿದ ಕಳ್ಳಬೈಕ್‌ ಕದ್ದು 2 ವಾರದಲ್ಲಿ ಮಾಲೀಕರಿಗೆ ಪಾರ್ಸೆಲ್ ಮಾಡಿದ ಕಳ್ಳ

ದ್ವಿಚಕ್ರ ವಾಹನದ ಮಾರಾಟ ಮತ್ತು ಖರೀದಿ ವ್ಯವಹಾರ ಮಾಡಿಕೊಂಡಿದ್ದ ಇವರ ಶಾಪ್ ಗೆ ಅ.31ರ ಶನಿವಾರ ಮಧ್ಯಾಹ್ನ ಗಣೇಶ್ ಉದ್ಯಾವರ ಎಂದು ಹೆಸರು ಹೇಳಿಕೊಂಡು ವ್ಯಕ್ತಿಯೊಬ್ಬ ಬಂದಿದ್ದಾನೆ.

Udupi: Person Escapes With Bike While Taking It For Test Ride In Manipal

ಹಳೆಯ ಬೈಕ್ ಕೊಳ್ಳಬೇಕಿದೆ ಎಂದು ಹೇಳಿ, ಮಾರಾಟ ಮಾಡಲು ಇಟ್ಟಿದ್ದ ಟಿವಿಎಸ್ ವಿಕ್ಟರ್ ಬೈಕ್ ನೋಡಿ, ಟೆಸ್ಟ್ ರೈಡ್ ಮಾಡಿಕೊಂಡು ಬರುತ್ತೇನೆಂದು ಕೀ ತೆಗೆದುಕೊಂಡು ಬೈಕ್ ರೈಡ್ ಗೆ ಹೋಗಿದ್ದಾನೆ. ಆದರೆ ಹಾಗೆ ಹೋದವ ಎಷ್ಟು ಹೊತ್ತಾದರೂ ಮರಳಲೇ ಇಲ್ಲ. ವಾಪಸ್ ಬರದೇ ಬೈಕ್ ಸಮೇತ ಪರಾರಿಯಾಗಿದ್ದಾನೆ. ಬೈಕ್ ಕಳೆದುಕೊಂಡ ಮಾಲೀಕ ಪ್ರಶಾಂತ್ ಕುಮಾರ್ ನಂತರ ದೂರು ನೀಡಿದ್ದಾರೆ.

Recommended Video

Sira , JDS ಅಭ್ಯರ್ಥಿ ಆಮ್ಮಾಜಮ್ಮ ಅವರು ಮತ ಚಲಾಯಿಸುವ ಮುನ್ನ ಮಾಡಿದ್ದೇನು | Oneindia Kannada

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
A man who came to buy an old bike escaped with bike in Lakshmindra Nagar at Manipal, udupi district
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X