ಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಧರಣಿಗೆ ಅನುಮತಿ ಇಲ್ಲ
ಉಡುಪಿ, ಫೆಬ್ರವರಿ 22: ಉಡುಪಿಯಲ್ಲಿ ಶಾಹಿನ್ ಬಾಗ್ ಮಾದರಿ ಸತ್ಯಾಗ್ರಹಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಇಂದು ಸಂಜೆ ಐದೂವರೆ ಸುಮಾರಿಗೆ ಪೌರತ್ವ ಕಾಯಿದೆ ವಿರೋಧಿಸಿ ಅನಿರ್ದಿಷ್ಟಾವಧಿ ಧರಣಿಗೆ ಚಾಲನೆ ನೀಡಲು ಆಯೋಜಕರು ತೀರ್ಮಾನಿಸಿದ್ದರು.
ಈ ಧರಣಿ ಸಂಬಂಧ ನಗರದ ಖಾಸಗಿ ಜಾಗದಲ್ಲಿ ಎಲ್ಲ ಸಿದ್ಧತೆಗಳನ್ನೂ ಮಾಡಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಪೊಲೀಸರು ಅನುಮತಿ ನಿರಾಕರಿಸಿದ್ದು, ಸರಣಿ ಧರಣಿ ಸತ್ಯಾಗ್ರಹ ಮುಂದೂಡಲ್ಪಟ್ಟಿದೆ. ಶಾಹಿನ್ ಬಾಗ್ ಸಂಯೋಜನಾ ಸಮಿತಿ ಇಂದು ಸಂಜೆ ಧರಣಿಗೆ ಚಾಲನೆ ನೀಡಲು ನಿರ್ಧರಿಸಿತ್ತು.
ಶಾಹಿನ್ ಬಾಗ್ ಇತ್ಯರ್ಥಕ್ಕೆ ನೇಮಕಗೊಂಡ ತ್ರಿಮೂರ್ತಿಗಳ ಕುರಿತು ಮಾಹಿತಿ
ಸಮಾನ ಮನಸ್ಕ ಸಂಘಟನೆಗಳೂ ಈ ಧರಣಿಗೆ ಬೆಂಬಲ ಸೂಚಿಸಿದ್ದವು. ಈ ಸಂಬಂಧ ನಗರದ ಮಧ್ಯ ಭಾಗದ ಖಾಸಗಿ ಜಮೀನಿನಲ್ಲಿ ಎಲ್ಲ ಸಿದ್ಧತೆಗಳೂ ನಡೆದಿದ್ದವು. ಆದರೆ ಉಡುಪಿ ಜಿಲ್ಲಾ ಪೊಲೀಸರು ಭದ್ರತೆ ಮತ್ತು ಸುರಕ್ಷತಾ ಕಾರಣಗಳಿಗಾಗಿ ಈ ಧರಣಿ ಸತ್ಯಾಗ್ರಹಕ್ಕೆ ಅನುಮತಿ ನಿರಾಕರಿಸಿದ್ದಾರೆ.
Comments
English summary
The police refused to give permission for the shaheen bagh model protest in udupi,
Story first published: Saturday, February 22, 2020, 17:20 [IST]