ದಂಡ ವಸೂಲಿಗೆ ಬಂದ ಮಫ್ತಿ ಪೊಲೀಸ್ ಮೇಲೆ ಜನಾಕ್ರೋಶ
Recommended Video
ಉಡುಪಿ, ಸೆಪ್ಟೆಂಬರ್ 13: ಕೇಂದ್ರ ಸರ್ಕಾರದ ನೂತನ ಮೋಟಾರು ವಾಹನ ಕಾಯಿದೆಯ ದಂಡ ವಸೂಲಿ ವಿರುದ್ಧ ನಾಗರೀಕರು ಎಲ್ಲೆಡೆ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಉಡುಪಿಯಲ್ಲೂ ಈ ತರಹದ ಘಟನೆ ನಡೆದಿದ್ದು, ಸಾರ್ವಜನಿಕರು ಇದರ ವಿಡಿಯೋ ಮಾಡಿ ಹರಿಬಿಟ್ಟಿದ್ದು ಈಗ ವೈರಲ್ ಆಗುತ್ತಿದೆ.
ಒಂದೇ ದಿನದಲ್ಲಿ 42 ಲಕ್ಷ ರೂ ದಂಡ ತೆತ್ತ ಬೆಂಗಳೂರಿಗರು
ನಗರದ ಪಿಪಿಸಿ ಕಾಲೇಜು ಸಮೀಪ ಈ ಘಟನೆ ನಡೆದಿದೆ. ಉಡುಪಿ ನಗರದ ಪಿಪಿಸಿ ಕಾಲೇಜ್ ಬಳಿ ಸಮವಸ್ತ್ರ ಧರಿಸದ, ಮಫ್ತಿಯಲ್ಲಿರುವ ಪೊಲೀಸನೋರ್ವ ಸಂಜೆ ವೇಳೆ ದ್ವಿಚಕ್ರ ವಾಹನಗಳನ್ನು ತಡೆದು ದಂಡ ವಸೂಲಿಗೆ ಇಳಿದಿದ್ದರು. ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ಸಮವಸ್ತ್ರ ಇಲ್ಲದ ಈ ಪೊಲೀಸನ ವರ್ತನೆ ಸಂಶಯ ಮೂಡಿಸಿತ್ತು. ಕ್ರಮೇಣ ಸ್ಥಳದಲ್ಲಿ ಜಮಾಯಿಸಿದ ಸ್ಥಳೀಯರು ಮತ್ತು ವಿದ್ಯಾರ್ಥಿಗಳು, ಸಂಚಾರಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು.
ಡಿಎಲ್ ಇಲ್ಲದವರ ನೆರವಿಗೆ ಬಂದ ಸಿಂಘಂ ರವಿ ಚೆನ್ನಣ್ಣನವರ್
ಮಾತ್ರವಲ್ಲದೆ ಅಲ್ಲೇ ಸ್ವಲ್ಪ ದೂರದಲ್ಲಿ ಇಲಾಖಾ ಜೀಪಿನಲ್ಲಿದ್ದ ಟ್ರಾಫಿಕ್ ಎಸ್ ಐ ಅವರನ್ನು ತಡೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಇಲಾಖಾ ವಾಹನದಲ್ಲಿದ್ದ ಟ್ರಾಫಿಕ್ ಪೊಲೀಸರು ದೂರದಲ್ಲಿ ವಾಹನದೊಳಗೇ ಕುಳಿತಿದ್ದರು. ಆದರೆ ಸಮವಸ್ತ್ರ ಧರಿಸದ ಪೊಲೀಸನನ್ನು ದಂಡ ವಸೂಲಿಗೆ ಇಳಿಸಲಾಗಿತ್ತು. ಇದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸಿದ್ದು, ಈ ಘಟನೆಗೆ ಕಾರಣವಾಯಿತು. ಅಂತೂ ಈ ಕುರಿತ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ, ಮಾತ್ರವಲ್ಲ ಜನರಲ್ಲಿ ದಂಡದ ಕುರಿತು ಇದ್ದ ಆಕ್ರೋಶ ಮತ್ತಷ್ಟು ಹೆಚ್ಚುವಂತೆ ಮಾಡಿದೆ.