ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸವಾಲು ಸ್ವೀಕರಿಸಿ ಕುವೆಂಪು ಕವನ ವಾಚಿಸಿದ ಪೇಜಾವರ ಶ್ರೀಗಳು

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 7: ಉಡುಪಿಯ ಪೇಜಾವರ ಮಠದ ಹಿರಿಯ ಶ್ರೀಗಳಾದ ವಿಶ್ವೇಶ ತೀರ್ಥರು ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕವನ ಓದುವ ಆಹ್ವಾನ‌ ಸ್ವೀಕರಿಸಿ ಕವನ ವಾಚಿಸಿದ್ದಾರೆ.

ಕನ್ನಡ್ ಗೊತ್ತಿಲ್ಲ? ಫೋನಿನಲ್ಲೇ ಕನ್ನಡ ಕಲಿಸಲು ಮುಂದಾದ ಯುವ ಬ್ರಿಗೇಡ್ ಕನ್ನಡ್ ಗೊತ್ತಿಲ್ಲ? ಫೋನಿನಲ್ಲೇ ಕನ್ನಡ ಕಲಿಸಲು ಮುಂದಾದ ಯುವ ಬ್ರಿಗೇಡ್

ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಕವನ ಓದುವ ಸಂಬಂಧ ಹ್ಯಾಷ್ ಟ್ಯಾಗ್ ಅಭಿಯಾನ ನಡೆಯುತ್ತಿದ್ದು, ನವೆಂಬರ್ ತಿಂಗಳು ಪೂರ್ತಿ ಅರ್ಥಪೂರ್ಣವಾಗಿ ಕನ್ನಡ ಮಾಸಾಚರಣೆ ಮಾಡುವುದು ಇದರ ಉದ್ದೇಶವಾಗಿದೆ. ಇದರ ಅಂಗವಾಗಿ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಕವನವನ್ನು ವಾಚಿಸುವಂತೆ ಸವಾಲಿನ ರೂಪದಲ್ಲಿ ಪ್ರಮುಖರ ಜೊತೆ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಬಂದ ಸವಾಲನ್ನು ಪೇಜಾವರ ಶ್ರೀಗಳು ಖುಷಿಯಿಂದಲೇ ಸ್ವೀಕರಿಸಿದ್ದಾರೆ.

Pejawara Sree Reads Kuvempu Kannada Poem In Facebook

ಆಹ್ವಾನ‌ ಸ್ವೀಕರಿಸಿ ರಾಷ್ಟ್ರಕವಿ ಕುವೆಂಪು ಅವರ ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ‌ ಮುಂದೆ ಕವನ ವಾಚಿಸಿದ್ದಾರೆ. ಸದ್ಯ ಕನ್ನಡ ಸಾಹಿತ್ಯ ಯಾವುದಾದರು ಪ್ರಕಾರದ ವಾಚನದ ಚಾಲೆಂಜ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸಿದ್ದು, ಹಿರಿಯರು ಕಿರಿಯರು ಈ ಕನ್ನಡ ಮಾಸದಲ್ಲಿ ಭಾಗವಹಿಸುತ್ತಾರೆ. ಪೇಜಾವರ ಶ್ರೀಗಳ ಈ ವಿಡಿಯೋ ಕನ್ನಡಾಭಿಮಾನಿಗಳಲ್ಲಿ ಹೊಸ ಹುಮ್ಮಸ್ಸು, ಚೈತನ್ಯ ತಂದಿದೆ.

English summary
Pejawara Vishwesha Tirtha of Pejawar Math accepted the invitation to read Kannada poetry on the social network and reads kuvempu poem,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X