ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿ ಕೃಷ್ಣ ಮಠದಲ್ಲಿ ಪೇಜಾವರರಿಂದ ಐತಿಹಾಸಿಕ ಇಫ್ತಾರ್ ಕೂಟ

By Sachhidananda Acharya
|
Google Oneindia Kannada News

ಉಡುಪಿ, ಜೂನ್ 25: ಶ್ರೀ ಕೃಷ್ಣನಿಗೂ ಇಫ್ತಾರ್ ಗೂ ಯಾವ ಸಂಬಂಧ? ಆದರೆ ಶನಿವಾರ ಉಡುಪಿಯ ಒಂದಷ್ಟು ಮುಸ್ಲಿಂ ಬಾಂಧವರಿಗಾಗಿ ಇಲ್ಲಿನ ಐತಿಹಾಸಿಕ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.

ಪೇಜಾವರ ಮಠಾಧೀಶರಾದ ವಿಶ್ವೇಶತೀರ್ಥ ಸ್ವಾಮೀಜಿಗಳು ಈ ಇಫ್ತಾರ್ ಕೂಟ ಆಯೋಜಿಸಿದ್ದರು. ರಂಜಾನ್ ಮಾಸದ ಕೊನೆಯ ಉಪವಾಸವನ್ನು ಕೃಷ್ಣಮಠದ ಆವರಣದಲ್ಲಿ ಪೂರೈಸಲು ಸ್ಥಳೀಯ ಮುಸ್ಲಿಂ ಸಮುದಾಯದವರಿಗೆ ಆಹ್ವಾನ ನೀಡಿದ್ದರು. ಸ್ವಾಮೀಜಿ ಕರೆ ಸ್ವೀಕರಿಸಿ ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳು ಮತ್ತು ಮುಖಂಡರು ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.

ರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಗೆ ಶುಭ ಹಾರೈಸಿದ ಪೇಜಾವರ ಶ್ರೀರಾಷ್ಟ್ರಪತಿ ಅಭ್ಯರ್ಥಿ ಕೋವಿಂದ್ ಗೆ ಶುಭ ಹಾರೈಸಿದ ಪೇಜಾವರ ಶ್ರೀ

Pejawar Swamiji Holds Iftar for Muslims in Krishna Math, Udupi

ಸ್ವತಃ ಪೇಜಾವರ ಶ್ರೀಗಳೇ ಎಲ್ಲರಿಗೂ ಖರ್ಜೂರವನ್ನು ವಿತರಿಸಿದರು. ಬಳಿಕ ಕೃಷ್ಣಮಠದ ಅನ್ನಬ್ರಹ್ಮ ಛತ್ರದಲ್ಲಿ ಸಾಮೂಹಿಕ ನಮಾಜು ನಡೆಯಿತು. ಈ ವೇಳೆ ಮಾತನಾಡಿದ ಸ್ವಾಮೀಜಿ ನಮ: ಮತ್ತು ನಮಾಜು ಎರಡೂ ಒಂದೆ. ಇವು ಪ್ರಾರ್ಥನೆಗಿರುವ ಎರಡು ಪ್ರತ್ಯೇಕ ವಿಧಾನಗಳಷ್ಟೇ ಅಂದರು.

ಸಾಮೂಹಿಕ ಪ್ರಾರ್ಥನೆಯ ಬಳಿಕ ಎಲ್ಲರಿಗೂ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

Pejawar Swamiji Holds Iftar for Muslims in Krishna Math, Udupi

ಒಂದು ಕಡೆ ಕರಾವಳಿಯ ಬಂಟ್ವಾಳ ಪರಿಸರ ಕೋಮು ಕಾರಣಗಳಿಗೆ ಸುದ್ದಿಯಲ್ಲಿದ್ದರೆ, ಪಕ್ಕದ ಉಡುಪಿ ಕೋಮು ಸೌಹಾರ್ದಕ್ಕೆ ಸಾಕ್ಷಿಯಾಯಿತು.

English summary
Vishwesha Theertha Swamiji of Pejawar Math on Saturday, June 24, held an Iftar get-together for Muslims observing the Ramadan fast at of Krishna math.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X