ರಾಮಮಂದಿರದ ಉದ್ಭಾಟನೆಗೂ ಮುನ್ನ ರಾಮೇಶ್ವರಂನಿಂದ ಕಾಶ್ಮೀರದವರೆಗೆ ರಥಯಾತ್ರೆ: ಪೇಜಾವರ ಶ್ರೀ
ಉಡುಪಿ, ಸೆಪ್ಟೆಂಬರ್ 14: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ರಾಮೇಶ್ವರಂನಿಂದ ಕಾಶ್ಮೀರದವರೆಗೆ ರಥಯಾತ್ರೆ ನಡೆಸಬೇಕೆಂದು ಉಡುಪಿ ಪೇಜಾವರ ಮಠದ ಪೀಠಾಪತಿ ಹಾಗೂ ರಾಮಜನ್ಮಭೂಮಿ ಟ್ರಸ್ಟ್ನ ಸದಸ್ಯರಾಗಿರುವ ಸ್ವಾಮಿ ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮುಂದಿನ ವರ್ಷಾಂತ್ಯಕ್ಕೆ ನಡೆಯುವ ನೂತನ ಮಂದಿರ ಸಮರ್ಪಣೆ ಹಾಗೂ ಶ್ರೀರಾಮನ ಪ್ರತಿಷ್ಠಾ ಮಹೋತ್ಸವಕ್ಕೆ ದಿನಾಂಕ ನಿಗದಿ ಪಡಿಸಿದ ಬಳಿಕ ದೇಶದ ಭಕ್ತರನ್ನು ಈ ಉತ್ಸವಕ್ಕೆ ಆಹ್ವಾನಿಸುವ ಸಲುವಾಗಿಯೂ ರಾಮೇಶ್ವರಂನಿಂದ ಕಾಶ್ಮೀರದವರೆಗೆ ಒಂದು ರಥಯಾತ್ರೆಯನ್ನು ಕೈಗೊಳ್ಳಬೇಕು. ರಾಮಮಂದಿರ ಉದ್ಘಾಟನೆಯಲ್ಲಿ ಭಾಗವಹಿಸುವಂತೆ ದೇಶದ ನಾಗರಿಕರನ್ನು ಆಕರ್ಷಿಸುವುದು ಯಾತ್ರೆಯ ಉದ್ದೇಶವಾಗಿದೆ. ಅಯೋಧ್ಯೆಯಲ್ಲಿ ಶ್ರೀ ರಾಮನ ದೇವಾಲಯಕ್ಕಾಗಿ ಆನೇಕರು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ ಯಾತ್ರೆಯ ಸಂದರ್ಭದಲ್ಲಿ ಅವರನ್ನೂ ನೆನಪಿಸಿಕೊಳ್ಳಬೇಕು," ಎಂದರು.
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ 1800 ಕೋಟಿ ರೂಪಾಯಿ ಖರ್ಚು!
"ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಕೆಲಸ ಕಾರ್ಯ ಅಂತಿಮ ಹಂತ ತಲುಪುತ್ತಿದೆ. ಆಯೋಧ್ಯೆಯ ಶ್ರೀರಾಮಚಂದ್ರನ ವಿಗ್ರಹ ನಿರ್ಮಾಣದ ಕುರಿತು ಆಯೋಧ್ಯೆ ರಾಮಜನ್ಮಭೂಮಿ ಟ್ರಸ್ಟ್ ಸಭೆ ಮಾಡಿದೆ. ಆಯೋಧ್ಯೆಯ ಪ್ರವಾಸಿ ಮಂದಿರದಲ್ಲಿ ನಡೆದ ಆಯೋಧ್ಯೆ ರಾಮಜನ್ಮಭೂಮಿ ಟ್ರಸ್ಸ್ ಸಭೆಯಲ್ಲಿ ರಾಮಮಂದಿರದಲ್ಲಿ ನೀಲಿ ಮಿಶ್ರಿತ ಶ್ವೇತ ಶಿಲೆಯಲ್ಲಿ ಶಿಲ್ಪಶಾಸ್ತ್ರೋಕ್ತ ರೀತಿಯಲ್ಲಿ ಶ್ರೀರಾಮನ ವಿಗ್ರಹ ನಿರ್ಮಿಸಿ ಪ್ರತಿಷ್ಠಾಪಿಸಲು ನಿರ್ಣಯಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚೆ ಮಾಡಲಾಗಿದೆ," ಎಂದರು.
ಮಂದಿರ
ನಿರ್ಮಾಣಕ್ಕೆ
1300
ಕೋಟಿ
ರೂ
ಖರ್ಚು
ಆರಂಭದಲ್ಲಿ
ಮಂದಿರ
ನಿರ್ಮಾಣಕ್ಕೆ
ಸುಮಾರು
400
ಕೋಟಿ
ವೆಚ್ಚ
ತಗಲಬಹುದೆಂದು
ಅಂದಾಜಿಸಲಾಗಿತ್ತು.
ಆದರೆ
ಜಿಎಸ್ಟಿ
ವೆಚ್ಚ,
ರಾಯಲ್ಟಿ
ಮೊದಲಾದ
ಅನೇಕ
ಕಾರಣಗಳಿಂದ
ನಿರ್ಮಾಣ
ವೆಚ್ಚ
1300
ಕೋಟಿ
ರೂ
ತಗಲಬಹುದೆಂದು
ಅಂದಾಜಿಸಲಾಗಿದೆ
.
ಆದರೆ
ಮಂದಿರಕ್ಕಾಗಿ
ದೇಶಾದ್ಯಂತ
ಭಕ್ತರು
ನೀಡುತ್ತಿರುವ
ದೇಣಿಗೆಯೂ
ಭರಪೂರ
ಹರಿದು
ಬರುತ್ತಿದೆ.
ತಿಂಗಳಿಗೆ
ಸುಮಾರು
50
ಲಕ್ಷಕ್ಕಿಂತಲೂ
ಅಧಿಕ
ದೇಣಿಗೆ
ಬರುತ್ತಿದ್ದು
ಕೆಲವೊಮ್ಮೆ
ಈ
ಮೊತ್ತ
ಕೋಟಿಗೂ
ಮೀರಿದೆ
.
ಆದ್ದರಿಂದ
ಈ
ತನಕದ
ಸುಮಾರು
300
ಕೋಟಿ
ಖರ್ಚನ್ನು
ಈಗ
ಹರಿದು
ಬರುತ್ತಿರುವ
ಹೆಚ್ಚುವರಿ
ದೇಣಿಗೆಯಿಂದಲೇ
ನಿರ್ವಹಿಸಲಾಗಿದೆ
ಎಂದು
ಮಾಹಿತಿ
ನೀಡಲಾಗಿದೆ
ಎಂದರು.
ಶ್ರೀರಾಮ ಮಂದಿರಕ್ಕೆ ಬಂದ ಚಿನ್ನ, ಬೆಳ್ಳಿ ಆಭರಣಗಳನ್ನು ಕರಗಿಸಲು ಹೊಸ ಪ್ಲಾನ್ ಏನು?
ಮಂದಿರಕ್ಕೆ ಬೇಕಾಗುವ ಸಾಗುವಾನಿ ಮರವನ್ನು ಮಹಾರಾಷ್ಟ್ರದಿಂದ ತರಿಸಿಕೊಳ್ಳಲಾಗುವುದು. ಈ ಖರ್ಚು ವೆಚ್ಚಗಳ ವಿವರಗಳನ್ನು ಸಭೆಗೆ ಸಲ್ಲಿಸಿ ಅನುಮೋದನೆ ಪಡೆಯಲಾಗಿದೆ. ಆರಂಭದ ದೇಣಿಗೆ ಸಂಗ್ರಹ ಅಭಿಯಾನದಿಂದ ಬಂದ ಸಾವಿರ ಕೋಟಿಗೂ ಮೀರಿದ ಮೂಲಧನದ ಸಮ್ಯಕ್ ನಿರ್ವಹಣೆಯ ಮಾಡಬೇಕಾದ ಕುರಿತಾಗಿಯೂ ಸಭೆಯಲ್ಲಿ ಗಂಭೀರ ಚರ್ಚೆ ಮಾಡಲಾಗಿದೆ.
ರಾಜ್ಯಾದ್ಯಂತ
ಸ್ವರ್ಣ
ಶಿಖರ
ಯಾತ್ರೆ
ಕೋಟ್ಯಂತರ
ಹಿಂದುಗಳ
ಶತಶತಮಾನಗಳ
ಕನಸು
ಸಾಕಾರಗೊಂಡು
ನಿರ್ಮಾಣವಾಗುತ್ತಿರುವ
ಭವ್ಯರಾಮಮಂದಿರದ
ಪ್ರಧಾನ
ಗರ್ಭಗುಡಿಯ
ಶಿಖರಕ್ಕೆ
ರಾಮಭಕ್ತ
ಹನುಮನ
ಪವಿತ್ರ
ನೆಲವಾಗಿರುವ
ಕರ್ನಾಟಕದಿಂದ
ಸ್ವರ್ಣ
ಶಿಖರವನ್ನು
ಅರ್ಪಿಸಬೇಕೆನ್ನುವ
ನಾಡಿನ
ಅಸಂಖ್ಯ
ಭಕ್ತರ
ಇಂಗಿತವನ್ನು
ಪೇಜಾವರ
ಶ್ರೀ
ವಿಶ್ವಪ್ರಸನ್ನತೀರ್ಥರು
ಸಭೆಯಲ್ಲಿ
ಪ್ರಸ್ತಾಪ
ಮಾಡಿದ್ದಾರೆ.