ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶಿರೂರು ಮಠಕ್ಕೆ ಪೀಠಾಧಿಪತಿ ನೇಮಕ; ಸಹೋದರನಿಂದ ವಿರೋಧ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 20; ಶಿರೂರು ಮಠದ ನೂತನ ಪೀಠಾಧಿಪತಿ ನೇಮಕದ ವಿಚಾರ ವಿವಾದಕ್ಕೆ ಕಾರಣವಾಗಿದೆ. ಬುಧವಾರ ನೂತನ ಪೀಠಾಧಿಪತಿ ಘೋಷಣೆಗೆ ತಯಾರಿ ನಡೆದಿದೆ.

ಲಕ್ಷ್ಮೀವರತೀರ್ಥರ ತೀರ್ಥರ ಪೂರ್ವಾಶ್ರಮದ ಸಹೋದರರಿಂದ ನೂತನ ಪೀಠಾಧಿಪತಿ ನೇಮಕಕ್ಕೆ ಆಕ್ಷೇಪ ವ್ಯಕ್ತವಾಗಿದೆ. ರಾಮನವಮಿಯಂದು ನೂತನ ಪೀಠಾಧಿಪತಿ ಘೋಷಣೆ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.

 ಶಿರೂರು ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥರು ತೀರಿಕೊಂಡು ತುಂಬಿತು ವರ್ಷ ಶಿರೂರು ಮಠಾಧೀಶರಾಗಿದ್ದ ಲಕ್ಷ್ಮೀವರ ತೀರ್ಥರು ತೀರಿಕೊಂಡು ತುಂಬಿತು ವರ್ಷ

ಸೋದೆ ಮಠಾಧೀಶರಿಂದ ನೂತನ ಪೀಠಾಧಿಪತಿ ಘೋಷಣೆ ಆಗಬೇಕಿದೆ. ಆದರೆ, ನೂತನ ಪೀಠಾಧಿಪತಿ ನೇಮಕಕ್ಕೆ ಲಾತವ್ಯ ಆಚಾರ್ಯ ವಿರೋಧ ವ್ಯಕ್ತಪಡಿಸಿದ್ದಾರೆ. ಲಾತವ್ಯ ಆಚಾರ್ಯ ಲಕ್ಷ್ಮೀವರತೀರ್ಥರ ಪೂರ್ವಾಶ್ರಮದ ಸಹೋದರರಾಗಿದ್ದಾರೆ.

ಉಡುಪಿ: ಶಿರೂರು ಮಠಕ್ಕೆ ತಾತ್ಕಾಲಿಕ ಉಸ್ತುವಾರಿ ನೇಮಕ ಉಡುಪಿ: ಶಿರೂರು ಮಠಕ್ಕೆ ತಾತ್ಕಾಲಿಕ ಉಸ್ತುವಾರಿ ನೇಮಕ

Opposed To Announce New successor Name For Shiroor Mutt

ಜುಲೈ 19, 2018ರಂದು ಸಂಶಯಾಸ್ಪದ ರೀತಿಯಲ್ಲಿ ಲಕ್ಷ್ಮೀವರತೀರ್ಥ ಸ್ವಾಮೀಜಿ ನಿಧನ ಹೊಂದಿದ್ದರು. ಸದ್ಯ ಸೋದೆ ಮಠ ಉಡುಪಿಯ ಶಿರೂರು ಮಠ ಮಠದ ವ್ಯವಹಾರ, ಆಸ್ತಿಪಾಸ್ತಿ, ತೆರಿಗೆ ನಿರ್ವಹಣೆ ನೋಡಿಕೊಳ್ಳುತ್ತಿದೆ.

ಚುನಾವಣೆ ಕಣಕ್ಕಿಳಿದು, ಹಿಂದೆ ಹೆಜ್ಜೆ ಇಟ್ಟಿದ್ದ ಶಿರೂರು ಶ್ರೀಗಳು ಚುನಾವಣೆ ಕಣಕ್ಕಿಳಿದು, ಹಿಂದೆ ಹೆಜ್ಜೆ ಇಟ್ಟಿದ್ದ ಶಿರೂರು ಶ್ರೀಗಳು

ಆದರೆ ಆಡಳಿತದಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ರಾಜ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿಯನ್ನು ಸಹ ಸಲ್ಲಿಕೆ ಮಾಡಲಾಗಿದೆ. ಅರ್ಜಿ ವಿಚಾರಣೆ ಬಾಕಿ ಇರುವಾಗ ನೂತನ ಪೀಠಾಧಿಪತಿ ಘೋಷಣೆ ಸರಿಯಲ್ಲ ಎಂಬುದು ಒಂದು ವಾದ.

Recommended Video

ಸರ್ಕಾರದ ಹೊಸ ಕಟ್ಟು ನಿಟ್ಟಿನ ಕ್ರಮ ! | Oneindia Kannada

ಎಳೆಯ ವಯಸ್ಸಿನ ವಟುವನ್ನು ಪೀಠಾಧಿಪತಿಯಾಗಿ ಘೋಷಣೆ ಮಾಡುತ್ತಿದ್ದಾರೆ. ಕನಿಷ್ಠ ಹತ್ತು ವರ್ಷದ ವೇದ ಅಧ್ಯಯನ ಮಾಡಿದವರನ್ನು ಪೀಠಾಧಿಪತಿ ಮಾಡಬೇಕು. ನೂತನ ಪೀಠಾಧಿಪತಿ ನೇಮಕಕ್ಕೆ ನಮ್ಮ ಸಮ್ಮತಿ ಇಲ್ಲ ಎಂದು ಕೀರ್ತಿಶೇಷ ಶಿರೂರು ಶ್ರೀಗಳ ಸಹೋದರರಾದ ಆಚಾರ್ಯ ಹೇಳಿದ್ದಾರೆ.

English summary
New successor's name to be announced on Wednesday, April 21, 2021 for Udupi's Shiroor mutt. Some people opposing to announce new successor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X