ಜಿಲ್ಲೆಯಲ್ಲಿ ಸಮುದಾಯಕ್ಕೆ ಸೋಂಕು ಹರಡಿಲ್ಲ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಜುಲೈ 1: ಉಡುಪಿ ಜಿಲ್ಲೆಯಲ್ಲಿ ಕೊರೊನಾ ವೈರಸ್ ಈತನಕ ಸಮುದಾಯಕ್ಕೆ ಹರಡಿಲ್ಲ, ಸಮುದಾಯದ ಸರ್ವೇ ಹೆಚ್ಚು ಮಾಡುತ್ತಿದ್ದೇವೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
Recommended Video
Patanjali,ಕೊರೊನಾಗೆ
ಪತಂಜಲಿಯ
ಆಯುರ್ವೇದ
ಮದ್ದು
,
ಕೈ
ಎತ್ತಿದ
ಬಾಬಾ
ರಾಮ್ದೇವ್
|
Oneindia
Kannada
ಕೊರೊನಾ ವೈರಸ್ ಸೋಂಕು ಸಮುದಾಯ ಹರಡುವಿಕೆಯನ್ನು ತಪ್ಪಿಸುವುದು ಜಿಲ್ಲಾಡಳಿತದ ಉದ್ದೇಶವಾಗಿದೆ ಎಂದು ಮಾಧ್ಯಮದವರ ಜೊತೆ ಮಾತನಾಡುತ್ತಾ ತಿಳಿಸಿದರು.
ಉಡುಪಿಯಲ್ಲಿ ಕೊರೊನಾ ವೈರಸ್ ಸೋಂಕಿಗೆ ಮತ್ತೊಂದು ಸಾವು
ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು. ಮಾಲ್, ಡೆಲಿವರಿ ಬಾಯ್ಸ್, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಇರುವ ಸಿಬ್ಬಂದಿಯ ತಪಾಸಣೆ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿ ಈತನಕ 600 ಸರಕಾರಿ ಬಸ್ ಚಾಲಕರ ತಪಾಸಣೆ ಮಾಡಿದ್ದೇವೆ ಎಂದರು.
ಮಹಾರಾಷ್ಟ್ರದಿಂದ ಪ್ರತಿದಿನ 250 ರಿಂದ 300 ಜನ ಬರುತ್ತಿದ್ದಾರೆ. ಹೀಗಾಗಿ ಪ್ರಾಥಮಿಕ ಸಂಪರ್ಕಿತರಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದ ಯಾವುದೇ ಪ್ರಕರಣ ಇಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಮಾಹಿತಿ ನೀಡಿದರು.
Comments
dc coronavirus community district health department kannada news udupi ಜಿಲ್ಲಾಧಿಕಾರಿ ವೈರಸ್ ಸಮುದಾಯ ಆರೋಗ್ಯ ಇಲಾಖೆ ಕನ್ನಡ ಸುದ್ದಿ ಉಡುಪಿ
English summary
The coronavirus has not spread to the community in the Udupi district, Said District Collector Jagadish.