ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುಮಗ ನಾಟ್ ರೀಚೆಬಲ್: ಉಡುಪಿಯಲ್ಲಿ ರದ್ದಾಯಿತು ಮದುವೆ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ನವೆಂಬರ್ 30: ಮದುವೆಯಾಗಬೇಕಿದ್ದ ಹುಡುಗ ನಾಟ್ ರೀಚೆಬಲ್ ಆಗಿ ಮದುವೆ ನಿಂತ ಘಟನೆ ಬೈಂದೂರಿನಲ್ಲಿ ನಡೆದಿದೆ. ಕುಂದಾಪುರ ಬಳ್ಕೂರಿನ ಪ್ರವೀಣ್ ಕುಮಾರ್ ಮದುವೆಗೆ ಕೈಕೊಟ್ಟಾತ.

ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಈತ, ಬಳ್ಕೂರು ನಡುಮನೆ ರಾಮಚಂದ್ರ ಎಂಬುವವರ ಪುತ್ರ. ಈತನಿಗೆ ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಯುವತಿಯೊಂದಿಗೆ ನಾಲ್ಕು ತಿಂಗಳ ಹಿಂದೆ ನಿಶ್ಚಿತಾರ್ಥ ನಡೆದಿತ್ತು. ನವೆಂಬರ್ 29ರಂದು ಮದುವೆ ದಿನ ನಿಗದಿಯಾಗಿತ್ತು. ಇತ್ತ ಹುಡುಗಿ ಮನೆಯವರು ಮದುವೆಗೆ ಸಂಪೂರ್ಣ ತಯಾರಿ ನಡೆಸಿದ್ದರು. ಆದರೆ ನವೆಂಬರ್ 26ರಂದು ಬೆಂಗಳೂರಿನಿಂದ ಬಳ್ಕೂರಿಗೆ ಬರುವುದಾಗಿ ತಿಳಿಸಿದ್ದ ಹುಡುಗ ಮಾತ್ರ ಬಂದಿರಲಿಲ್ಲ.

ಒಂದು ಅನಾಮಧೇಯ ಕಾಲ್, ಮದುವೆ ಕ್ಯಾನ್ಸಲ್ಒಂದು ಅನಾಮಧೇಯ ಕಾಲ್, ಮದುವೆ ಕ್ಯಾನ್ಸಲ್

ಆತನಿಗೆ ಕರೆ ಮಾಡಿದರೆ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿತ್ತು. ಮದುವೆಯ ದಿನ ಮಗ ನಾಪತ್ತೆಯಾಗಿರುವ ಬಗ್ಗೆ ತಂದೆ ರಾಮಚಂದ್ರ ಅವರು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ. ಪೊಲೀಸರು ಈಗಾಗಲೇ ಹುಡುಕಾಟ ಆರಂಭಿಸಿದ್ದಾರೆ. ಇತ್ತ ಹುಡುಗಿಯ ಕಡೆಯವರು ಏನು ಮಾಡಬೇಕೆಂದು ತೋಚದೇ ಗೊಂದಲದಲ್ಲಿದ್ದಾರೆ. ಮದುವೆ ಖರ್ಚಿನ ಪರಿಹಾರ ನೀಡಬೇಕು ಎಂದು ಹುಡುಗಿ ಕಡೆಯವರು ಆಗ್ರಹಿಸಿದ್ದಾರೆ.

Marriage Cancelled Due To Groom Missed In Bainduru Of Udupi

ಮಧ್ಯಪ್ರದೇಶದಲ್ಲಿ ವರನಿಗೆ ಶೌಚಾಲಯದೊಂದಿಗೆ ಸೆಲ್ಫಿ ಕಡ್ಡಾಯಮಧ್ಯಪ್ರದೇಶದಲ್ಲಿ ವರನಿಗೆ ಶೌಚಾಲಯದೊಂದಿಗೆ ಸೆಲ್ಫಿ ಕಡ್ಡಾಯ

ಕಳೆದ ವಾರವಷ್ಟೇ ರಾಮನಗರದಲ್ಲೂ ಮದುವೆ ನಡೆಯುತ್ತಿದ್ದ ಸಮಯದಲ್ಲಿ ಬಂದ ಅನಾಮಧೇಯ ಕರೆಯಿಂದಾಗಿ ಮದುವೆ ರದ್ದಾದ ಘಟನೆ ನಡೆದಿತ್ತು.

English summary
A boy who is supposed to be married is missing and marriage cancelled in Bainduru in udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X