ಉಡುಪಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಉಡುಪಿಯಲ್ಲಿ ಶೆಲ್ ಫಿಶ್ ಹಿಡಿಯಲು ಮುಗಿಬಿದ್ದ ಜನ

By ಉಡುಪಿ ಪ್ರತಿನಿಧಿ
|
Google Oneindia Kannada News

ಉಡುಪಿ, ಏಪ್ರಿಲ್ 10: ಉಡುಪಿಯ ಉದ್ಯಾವರದ ಪಿತ್ರೋಡಿ ಬಳಿ ಇರುವ ಪಾಪನಾಶಿನಿ ನದಿಯಲ್ಲಿ ಶೆಲ್ ಫಿಶ್ ಹಿಡಿಯಲು ಜನರು ಮುಗಿಬಿದ್ದಿದ್ದಾರೆ.

ಪಾಪನಶಿನಿ ನದಿಯಲ್ಲಿ ಮುಳುಗಿ ಮೀನು ತೆಗೆಯಲು ಜನರು ಧಾವಿಸಿದ್ದರು. ಸ್ಥಳೀಯವಾಗಿ ಇದನ್ನು ಮರುವಾಯಿ ಮೀನು ಎಂದು ಕರೆಯುತ್ತಾರೆ. ಕೊರೊನಾ ವೈರಸ್ ಇರುವ ಹಿನ್ನಲೆಯಲ್ಲಿ ಜನರು ಚಿಕನ್ ತಿನ್ನಲು ಭಯ ಪಡುತ್ತಿದ್ದಾರೆ. ಹಾಗಾಗಿ ಮೀನಿಗೆ ಬಹಳ ಬೇಡಿಕೆ ಇದೆ.

ಮಂಗಳೂರು, ದಕ್ಷಿಣ ಕನ್ನಡ, ಸೀಲ್ಡ್ ಡೌನ್: ಜಿಲ್ಲಾಡಳಿತದ ಸ್ಪಷ್ಟನೆಮಂಗಳೂರು, ದಕ್ಷಿಣ ಕನ್ನಡ, ಸೀಲ್ಡ್ ಡೌನ್: ಜಿಲ್ಲಾಡಳಿತದ ಸ್ಪಷ್ಟನೆ

ಪ್ರತಿದಿನ ಕತ್ತಲಾವರಿಸುತ್ತಿದ್ದಂತೆ ಪಾಪನಾಶಿನಿ ನದಿಯತ್ತ ಮೀನು ಪ್ರಿಯರು ಬರುತ್ತಾರೆ. ನದಿಯಲ್ಲಿ ನೀರು ಇಳಿಮುಖವಾಗಿದ್ದು, ಹೀಗಾಗಿ ಜನರು ಮೀನು ಹಿಡಿಯಲು ಬರುತ್ತಿದ್ದಾರೆ.

Lockdown: Shell Fishing In Kundapura

ಮರುವಾಯಿ ಮೀನು ತೆಗೆಯಲು ಉಡುಪಿ ಜಿಲ್ಲಾಡಳಿತ ಅವಕಾಶ ನೀಡಿದೆ ಆದರೆ ಗುಂಪು ಸೇರುವಂತಿಲ್ಲ ಎಂದು ಖಡಕ್ ಆದೇಶ ನೀಡಿದೆ. ಗುಂಪು ಗುಂಪಾಗಿ ಜನ ಸೇರಿದ್ದರಿಂದ ಸ್ಥಳಕ್ಕೆ ಪೊಲೀಸ್ ದಾಳಿ ಮಾಡಿದ್ದಾರೆ.

Lockdown: Shell Fishing In Kundapura

ಶೆಲ್ ಮೀನು ಹಿಡಿಯಲು ಬಂದವರ ಬೈಕ್ ಗಳನ್ನು ಸೀಜ್ ಮಾಡಿದ್ದಾರೆ. ಹನ್ನೊಂದು ಬೈಕ್ ಗಳನ್ನು ಕಾಪು ಪೊಲೀಸರು ಸೀಜ್ ಮಾಡಿದ್ದು, ಸ್ಥಳದಲ್ಲಿ ಸೇರಿದ್ದ ಜನರು ಹೆದರಿ ಪರಾರಿಯಾಗಿದ್ದಾರೆ. ಗುಂಪಾಗಿ ಮರುವಾಯಿ ಮೀನು ಹಿಡಿಯಲು ಬರಬಾರದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

English summary
People are drowning to catch shellfish in the Papanashini River near Udupi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X