ಕ್ಷಿಪ್ರ ಕಾರ್ಯಾಚರಣೆ; ಬಾವಿಗೆ ಬಿದ್ದಿದ್ದ ವೃದ್ಧನ ರಕ್ಷಣೆ
ಉಡುಪಿ, ಜನವರಿ 15: ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ 80 ವರ್ಷದ ವೃದ್ಧನನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಣೆ ಮಾಡಿದರು. ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಗೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಸರಿಯಾದ ಸಮಯಕ್ಕೆ ರಕ್ಷಣೆ ಮಾಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಕದಕಟ್ಟೆಯಲ್ಲಿ ಅಚ್ಯುತ ಎಂಬ 80 ವರ್ಷ ವೃದ್ಧರು ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿಯ ಕ್ಷಿಪ್ರ ಕಾರ್ಯಾಚರಣೆಯ ಪರಿಣಾಮ ಅವರನ್ನು ರಕ್ಷಣೆ ಮಾಡಲಾಗಿದೆ.
ಶಿವಮೊಗ್ಗ; ಸಿಎಂ ತವರು ಕ್ಷೇತ್ರದಲ್ಲಿ ಇಬ್ಬರು ರೈತರ ಆತ್ಮಹತ್ಯೆ
ಅಚ್ಯುತ
ಎಂಬುವರು
ಶುಕ್ರವಾರ
30
ಅಡಿ
ಆಳದ
ತೆರೆದ
ಬಾವಿಗೆ
ಬಿದ್ದಿದ್ದರು.
ತಕ್ಷಣ
ಮನೆಯವರು
ಕುಂದಾಪುರ
ಅಗ್ನಿಶಾಮಕ
ದಳಕ್ಕೆ
ಕರೆ
ಮಾಡಿ
ಮಾಹಿತಿ
ನೀಡಿದ್ದರು.
ಸ್ಥಳಕ್ಕೆ
ಆಗಮಿಸಿದ
ಸಿಬ್ಬಂದಿ
ರಕ್ಷಣಾ
ಕಾರ್ಯಾಚರಣೆ
ಕೈಗೊಂಡರು.
ಉಡುಪಿ ಜಿಲ್ಲೆಯಾದ್ಯಂತ ಗುಡುಗು, ಮಿಂಚಿನಿಂದ ಕೂಡಿದ ಜಡಿಮಳೆ
ಬಾವಿಗೆ ಇಳಿದ ದಳದ ಸಿಬ್ಬಂದಿ ನಾಗರಾಜ್ ಪೂಜಾರಿ ವೃದ್ಧರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾದರು. ಅಗ್ನಿಶಾಮಕ ಸಿಬ್ಬಂದಿಯವರ ಕ್ಷಿಪ್ರ ಕಾರ್ಯಾಚರಣೆಗೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
Recommended Video
ಉಡುಪಿ: ಮದುವೆ ಮಂಟಪಕ್ಕೆ ತೆರಳಿ ಬಾಲ್ಯ ವಿವಾಹ ತಡೆ