ನದಿಗೆ ಹಾರಿದ ಕುಂದಾಪುರದ ಉದ್ಯಮಿ: ಮುಂದುವರೆದ ಶೋಧ ಕಾರ್ಯ
ಉಡುಪಿ, ಜನವರಿ 27: ಹೋಟೆಲ್ ಉದ್ಯಮಿಯೋರ್ವರು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.
ಕುಂದಾಪುರದ ಚಿಕ್ಕನ್ಸಾಲ್ ರಸ್ತೆ ನಿವಾಸಿ ಕೆ.ಜಿ. ಗಣೇಶ್ (51) ನದಿಗೆ ಹಾರಿದ ಉದ್ಯಮಿ. ಕುಂದಾಪುರದ ರಾಷ್ಟ್ರೀಯ ಹೆದ್ದಾರಿ 66 ರ ಸಂಗಮ ಸಮೀಪದ ಹೇರಿಕುದ್ರು ಸೇತುವೆ ಮೇಲಿಂದ ನಿನ್ನೆ ಸಂಜೆ ನದಿಗೆ ಹಾರಿದ್ದರು.
ಕೆಎಎಸ್ ಅಧಿಕಾರಿ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು!
ತಡರಾತ್ರಿವರೆಗೆ ಹುಡುಕಾಟ ನಡೆಸಿದ್ದರೂ, ಇದುವರೆಗೆ ಉದ್ಯಮಿ ದೇಹ ಪತ್ತೆಯಾಗಿಲ್ಲ. ತನ್ನ ಮನೆಯಿಂದ ಆಟೋ ರಿಕ್ಷಾದಲ್ಲಿ ಬಂದಿದ್ದ ಗಣೇಶ್, ಹೇರಿಕುದ್ರು ಸೇತುವೆಯಲ್ಲಿ ಇಳಿದು ನಡೆದುಕೊಂಡು ಹೋಗಿದ್ದಾರೆ.
ಅಲ್ಲಿ ಪರ್ಸ್, ಚಪ್ಪಲಿ, ಕನ್ನಡಕ ಇಟ್ಟು ಎಲ್ಲರೂ ನೋಡ ನೋಡುತ್ತಿದ್ದಂತೆ ಸೇತುವೆಯಿಂದ ನದಿಗೆ ಹಾರಿದ್ದಾರೆ. ಇದನ್ನು ನೋಡಿದ ಕೂಡಲೇ ನದಿಯಲ್ಲಿ ದೋಣಿ ಮೂಲಕ ಮೀನು ಹಿಡಿಯುತ್ತಿದ್ದ ಮೀನುಗಾರರು ರಕ್ಷಿಸಲು ಯತ್ನಿಸಿದ್ದಾರಾದರೂ ಉದ್ಯಮಿ ಗಣೇಶ್ ದೇಹ ಮಾತ್ರ ಇನ್ನೂ ಪತ್ತೆಯಾಗಿಲ್ಲ. ಇದೀಗ ಶೋಧಕಾರ್ಯ ಮುಂದುವರೆದಿದೆ.